ಅಪ್ರಾಪ್ತ ಬಾಲಕಿಯ ಅಪಹರಿಸಿ ವಿವಾಹ; ಯುವಕನ ಬಂಧನ

1 min read

Tumkur News
ಕುಣಿಗಲ್ : ಅಪ್ರಾಪ್ತ ವಯಸ್ಕಳನ್ನು ಅಪಹರಿಸಿ, ವಿವಾಹವಾದ ಆರೋಪಿ ಪವನ್ ನನ್ನು ಹುಲಿಯೂರು ದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಎಂಟಿಸಿ ಬಸ್ ದರ ಹೆಚ್ಚಳ ಸಾಧ್ಯತೆ!

ಬಾಲಕಿ ಹುಲಿಯೂರುದುರ್ಗ ಪಟ್ಟಣದವಳಾಗಿದ್ದು, ಮೇ 22 ರಂದು ಪವನ್ ತಮ್ಮ ಇಬ್ಬರು ಸಹಚರರೊಂದಿಗೆ ಸೇರಿ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಎಂದು ಬಾಲಕಿ ತಂದೆ ದೂರು ನೀಡಿದ್ದರು.

ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!

ಪ್ರಕರಣ ದಾಖಲಿಸಿಕೊಂಡ ಹುಲಿಯೂರು ದುರ್ಗ ಪೊಲೀಸರು, ಆರೋಪಿ ಪವನ್ ಹಾಗೂ ಬಾಲಕಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆ ತಂದು ಬಾಲಕಿಯನ್ನು ವಿಚಾರಿಸಿದಾಗ, ಆರೋಪಿ ನನ್ನನ್ನು ಆಂಧ್ರಪ್ರದೇಶದ ಆನಂತಪುರಕ್ಕೆ ಕರೆದುಕೊಂಡು ಹೋಗಿ ಬಳಿಕ ತುಮಕೂರು ಜಿಲ್ಲೆ ಪಾವಗಡಕ್ಕೆ ಕರೆ ತಂದು ಇಲ್ಲಿನ ದೇವಸ್ಥಾನದಲ್ಲಿ ಮದುವೆಯಾಗಿ, ನನ್ನೊಂದಿಗೆ ದೇಹ ಸಂಪರ್ಕ ಮಾಡಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಇದರ ಅನ್ವಯ ಪವನ್ ವಿರುದ್ದ ಪೋಕ್ಸೋ ಕಾಯ್ದೆ ಅಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

You May Also Like

More From Author

+ There are no comments

Add yours