Tumkur News
ಸಿಂದಗಿ : ಹೊಲದಲ್ಲಿ ವಿಷಪೂರಿತ ನೀರು ಕುಡಿದು ಹತ್ತು ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಡಂಬಳ ತಾಂಡಾದ ಹೊಲದಲ್ಲಿ ಶನಿವಾರ ನಡೆದಿದೆ.
ಆರ್ಥಿಕ ನೆರವಿಗೆ e-KYC ಅವಧಿ ವಿಸ್ತರಣೆ
ಹೊಲದ ಕಾವಲಿಯಲ್ಲಿ ರಸಗೊಬ್ಬರದ ಚಿಲ ಬಿದ್ದಿದ್ದು ಅಲ್ಲಿಂದ ಹರಿಯುತ್ತಿರುವ ನೀರು ಕುಡಿದ ಹತ್ತು ಕುರಿಗಳು ಸಾವನ್ನಪ್ಪಿದ್ದು, ಇನ್ನುಳಿದ ಎಂಟು ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿವೆ. ತಾಂಡಾದ ರೈತ ಮಹಿಳೆ ಕಾಂತಾಬಾಯಿ ಮೋತಿಲಾಲ ರಾಠೋಡ ಅವರಿಗೆ ಸೇರಿದ ಹತ್ತು ಕುರಿಗಳು ಇವಾಗಿವೆ.
ಬಿಎಂಟಿಸಿ ಬಸ್ ದರ ಹೆಚ್ಚಳ ಸಾಧ್ಯತೆ!
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ ಅವರು ರೈತ ಮಹಿಳೆ ಕಾಂತಾಬಾಯಿ ಮೋತಿಲಾಲ ರಾಠೋಡ ಅವರಿಗೆ ಸಾಂತ್ವಾನ ಹೇಳಿದರು. ಬಡವರಾಗಿದ್ದ ಅವರಿಗೆ 10 ಸಾವಿರ ರೂ. ಸಹಾಯಧನ ನೀಡಿದರು. ಸರಕಾರದಿಂದ ಬರುವ ಸಹಾಯಧನವನ್ನು ಕೊಡಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
+ There are no comments
Add yours