ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್

1 min read

Tumkur News
ತುಮಕೂರು: ತಾಕತ್ತು ಇದ್ರೆ, ಅವನು ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಅವನು ಗೆದ್ದುಬಿಟ್ಟರೆ, ನಾನು ಜೀವನ ಪರಿಯಂತ ಅವರ ಮನೆಯಲ್ಲಿ ಕೂಲಿ ಮಾಡುತ್ತೇನೆ ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಏಕವಚನದಲ್ಲಿ‌ ಸವಾಲು ಹಾಕಿದ್ದಾರೆ.

ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವ ವೇಳೆ ಮತಪತ್ರವನ್ನು ಸರಿಯಾಗಿಯೇ ಹಿಡಿದು ತೋರಿಸಿದ್ದೇನೆ. ಕಾಣಿಸದಿದ್ದರೆ, ಸರಿಯಾಗಿ ತೋರಿಸಿ ಎಂದು‌ ಹೇಳಬೇಕಿತ್ತು. ಇವರ ಮನೆಯವರೇ ನಾಟಕ ಮಾಡಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅವನೇನು‌ ಕತ್ತೆ ಕಾಯುತಿದ್ನಾ?; ಎಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ತರಾಟೆ

ಕುಮಾರಸ್ವಾಮಿ ದೊಡ್ಡ ನಾಟಕಕಾರ, ಊಸರವಳ್ಳಿ ಇದ್ದಂತೆ. ಅವನೊಬ್ಬನೇ ಸತ್ಯ ಹರೀಶ್ಚಂದ್ರ, ಸರ್ವಜ್ಞ ಎಂದುಕೊಂಡಿದ್ದಾನೆ ಎಂದು ಹೇಳಿದರು.

ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ; ಎಚ್ಡಿಕೆ ಆರೋಪ

ನನ್ನ  ತೇಜೋವಧೆ ಮಾಡಲು ಕುಮಾರಸ್ವಾಮಿ ಮಾಡಿರುವ ಷಢ್ಯಂತರ ಇದು. ನಾನು ಆರಂಭದಿಂದಲೂ ಬಿಜೆಪಿ ವಿರುದ್ಧ ರಾಜಕಾರಣ ಮಾಡಿದ್ದೇನೆ. ಹಾಗಿರುವಾಗ ನಾನು ಹೇಗೆ ಬಿಜೆಪಿಗೆ ವೋಟ್ ಹಾಕಲು ಸಾಧ್ಯ? ಈ ರೀತಿ ಅವಮಾನಗಳನ್ನು ಸಹಿಸಿಕೊಂಡು ಈ ಪಕ್ಷದಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ಹೊರ ಬರುತ್ತಾರೆ. ಇವರಿಗೆ ಗುಲಾಮರ ರೀತಿ ಇದ್ದಾಗ ಮಾತ್ರ, ಇಷ್ಟವಾಗುತ್ತೆ. ಒಕ್ಕಲಿಗ ನಾಯಕರನ್ನು ತುಳಿಯುವುದೇ ಇವರ ಕೆಲಸ. ಒಕ್ಕಲಿಗರಿಗೆ ಇವರ‌ ಕೊಡುಗೆ ಏನೂ ಇಲ್ಲ ಎಂದರು.

About The Author

You May Also Like

More From Author

+ There are no comments

Add yours