ಕುಣಿಗಲ್ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ತುಮಕೂರು ನ್ಯೂಸ್. ಇನ್(ಜು.16)

Tumkurnews.in

ಕುಣಿಗಲ್ ನ್ಯಾಯಾಲಯದ ತಾಲ್ಲೂಕು ಕಾನೂನು ಸೇವಾ ಸಮಿತಿಯಲ್ಲಿ ಖಾಲಿ ಇರುವ ಒಂದು ಗುಮಾಸ್ತ ಕಂ ಬೆರಳಚ್ಚುಗಾರರ (ಆಡಳಿತ ಸಹಾಯಕರ) ಹಾಗೂ ಒಂದು ದಲಾಯತ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಟಟಿರಬೇಕು. ಗುಮಾಸ್ತ ಕಂ ಬೆರಳಚ್ಚುಗಾರ ಹುದ್ದೆಗೆ 14,200 ರೂ.ಗಳ ಮಾಸಿಕ ವೇತನ ನಿಗಧಿಪಡಿಸಿದ್ದು, ಪಿಯುಸಿ ಹಾಗೂ ಜೂನಿಯರ್ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ದಲಾಯತ್ ಹುದ್ದೆಗೆ 10,887 ರೂ.ಗಳ ಮಾಸಿಕ ವೇತನ ನಿಗಧಿಪಡಿಸಿದ್ದು, ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿರಬೇಕು.
ಈ ಎರಡು ಹುದ್ದೆಗಳನ್ನು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಆಸಕ್ತರು ಅಗತ್ಯ ದಾಖಲೆಗಳು, ಭಾವಚಿತ್ರ, ಮೊಬೈಲ್ ಸಂಖ್ಯೆಯನ್ನು ಒಳಗೊಡಂತೆ ತಮ್ಮ ಸ್ವ ವಿವಿರಗಳ ಅರ್ಜಿಯೊಂದಿಗೆ ತಮ್ಮ ಮೇಲೆ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಇಲ್ಲದಿರುವ ಕುರಿತು ಒಂದು ಸ್ವಯಂ ದೃಢೀಕರಣ ಪತ್ರವನ್ನು ಲಗತ್ತಿಸಿ ಜುಲೈ 24ರೊಳಗಾಗಿ ಇ-ಮೇಲ್
scjkunigal@gmail.com ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕು ಎಂದು ಕುಣಿಗಲ್ ತಾಲೂಕಿನ ಕಾನೂನು ಸೇವಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours