Tumkur News
ಕೊರಟಗೆರೆ: ಕಾಲು ಮುರಿದುಕೊಂಡು ಹಾಸಿಗೆ ಹಿಡಿದಿದ್ದ ತಿಪ್ಪೆರಾಜು ಎಂಬ ವ್ಯಕ್ತಿಯನ್ನು ಆತನ ಪತ್ನಿ ರತ್ನಮ್ಮ ಕೊಲೆ ಮಾಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಕೊಲೆ ಬೆದರಿಕೆ ಪತ್ರ
ಆರು ತಿಂಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ. ಆತನ ಪತ್ನಿ ರತ್ನಮ್ಮ ಆರೈಕೆ ಮಾಡಲಾಗದೆ ಬೇಸರಗೊಂಡು ರಾತ್ರಿ ವೇಳೆ ಮಲಗಿದ್ದ ಸಮಯದಲ್ಲಿ ಹರಿತವಾದ ಚಾಕುವಿನಿಂದ ಗಂಡನ ತಲೆ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾಳೆ.
(ಕೊಲೆಯಾದ ವ್ಯಕ್ತಿ)
ಬೆಳಗ್ಗೆ ಗ್ರಾಮಸ್ಥರು ಅವರ ಮನೆಗೆ ಹೋಗಿ ನೋಡಿದಾಗ, ರಕ್ತದ ಮಡುವಿನಲ್ಲಿ ತಿಪ್ಪೆಸ್ವಾಮಿ ಬಿದ್ದಿರುವುದು ಕಂಡು ಅವರ ಮಗ ವೇಣುವಿಗೆ ವಿಚಾರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಭೀಕರ ಕೊಲೆ; ಅಕ್ಕನನ್ನು ಚುಡಾಯಿಸಿದಾತನ ಪಂಚ್ ಮಾಡಿ ಕೊಂದ ತಮ್ಮ
ನಂತರ ಊರಿಗೆ ಬಂದ ಮಗನು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಸಿಪಿಐ ಸಿದ್ಧರಾಮೇಶ್ವರ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ರತ್ನಮ್ಮನನ್ನು ಬಂಧಿಸಿದ್ದಾರೆ.
+ There are no comments
Add yours