ತುಮಕೂರು: 25 ಸಾವಿರ ಬಂಡವಾಳ: ತಿಂಗಳಿಗೆ 3 ಲಕ್ಷ ಆದಾಯ!

1 min read

ಶೋಭರಾಣಿಯವರನ್ನು ಕೈ ಹಿಡಿದ ‘ಸಂಜೀವಿನಿ’

Tumkurnews
ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿಯ ಶೋಭರಾಣಿಯವರು ಬಸವನಹಳ್ಳಿಯ ಶ್ರೀ ಭಾರತಾಂಬೆ ಸ್ವ ಸಹಾಯ ಗುಂಪು ರಚಿಸಿಕೊಂಡು ಉಳಿತಾಯ ಮಾಡಿಕೊಂಡು ಸಣ್ಣ ಪ್ರಮಾಣದಲ್ಲಿ ಉದ್ಯಮ ಮಾಡುವ ಸಲುವಾಗಿ ಒಕ್ಕೂಟದಡಿ ಸಮುದಾಯ ಬಂಡವಾಳ ನಿಧಿಯಾಗಿ 25 ಸಾವಿರ ಸಾಲ ಪಡೆದು ಮನೆಯಲ್ಲಿಯೇ ಹಪ್ಪಳ ಉದ್ಯಮ ಪ್ರಾರಂಭಿಸಿದ್ದು, ಈಗ ತಿಂಗಳಲ್ಲಿ 3 ಲಕ್ಷ ಆದಾಯ ಗಳಿಸುತ್ತಿದ್ದಾರೆ!

ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ

ಉತ್ತಮ ಹಾಗೂ ಶುಚಿ-ರುಚಿಯಾದ ಹಪ್ಪಳಕ್ಕೆ ಹೆಸರುವಾಸಿಯಾದ ಶೋಭರಾಣಿಯವರು ಸಂಜೀವಿನಿ ಯೋಜನೆಯಡಿ ಹಂತ ಹಂತವಾಗಿ ಸಾಲ ಪಡೆದು ಉದ್ಯಮವನ್ನು ಅಭಿವೃದ್ದಿ ಪಡಿಸಿಕೊಂಡು ಬಂದಿದ್ದಾರೆ. ನಂತರ ಸಂಜೀವಿನಿಯ ಸ್ವಾವಲಂಬನೆ ಯೋಜನೆಯಡಿ ಗುರುತಿಸಿ 3.5 ಲಕ್ಷ ಮರುಪಾವತಿ ರಹಿತ ಅನುದಾನವನ್ನು ನೀಡಿತು. ಇದನ್ನು ಪಡೆದ ಶೋಭಾರಾಣಿ ದೊಡ್ಡ ಮಟ್ಟದಲ್ಲಿ ಪಿ.ಆರ್.ಕೆ ಪ್ರೋಡೆಕ್ಟ್ಸ್ ಎಂಬ ಹೆಸರಿನಲ್ಲಿ ಅಕ್ಕಿ ಹಪ್ಪಳ, ರಾಗಿ ಹಪ್ಪಳ, ಕಾಳು ಹಪ್ಪಳ, ಉದ್ದಿನ ಹಪ್ಪಳ ಹೀಗೆ ವಿವಿಧ ಹಪ್ಪಳ ತಯಾರಿಕೆ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಸದ್ಯ ಇವರು ತಿಂಗಳಿಗೆ 3 ಲಕ್ಷ ಆದಾಯ ಗಳಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ತುಮಕೂರು ಜಿಲ್ಲಾ ಪಂಚಾಯತ್ ಇವರ ಸಾಧನೆಯನ್ನು ಗುರುತಿಸಿದೆ.

ತುಮಕೂರು: ರೈತರಿಂದ ಸಾಲ ವಸೂಲಾತಿಗೆ ತಡೆ: ಜಿಲ್ಲಾಧಿಕಾರಿ ಆದೇಶ

About The Author

You May Also Like

More From Author

+ There are no comments

Add yours