Tumkur News
ತುಮಕೂರು: ಸಚಿವ ಬಿ.ಸಿ.ನಾಗೇಶ್ ಮನೆಗೆ ಎನ್.ಎಸ್.ಯು.ಐ. ಮುತ್ತಿಗೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಬೇಲ್ ಸಿಕ್ಕರೂ ಬಿಡುಗಡೆ ಭಾಗ್ಯ ದೊರೆಯದಂತಾಗಿದೆ.
ಬೇಲ್ ಮಂಜೂರಾಗಿ ಇಂದು ಆರೋಪಿಗಳ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. 24 ಆರೋಪಿಗಳಿಗೆ ಬರೊಬ್ಬರಿ 48 ಜನರ ಜಾಮೀನು ತಿಪಟೂರು ಕೋರ್ಟ್ ಕೇಳಿತ್ತು. ಕೋರ್ಟ್ ಒಬ್ಬ ಆರೋಪಿಗೆ ತಲಾ ಇಬ್ಬರಂತೆ 24 ಮಂದಿಗೂ ಸ್ಯೂರಿಟಿ ನೀಡುವಂತೆ ಕೋರ್ಟ್ ಕೇಳಿದೆ.
ಗ್ರಾಮೀಣ ಬ್ಯಾಂಕ್ ಉದ್ಯೋಗ ಆಸಕ್ತರಿಗೆ ಸಿಹಿ ಸುದ್ದಿ; 8,106 ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಾಮೀನುದಾರರು ಖುದ್ದು ಹಾಜರಾಗಿ ದಾಖಲೆ ಸಲ್ಲಿಸುವಂತೆ ತಿಪಟೂರಿನ ಹೆಚ್ಚುವರಿ ಸೆಷನ್ ಕೋರ್ಟ್ ಸೂಚಿಸಿದೆ. ಹಾಗಾಗಿ ಆರೋಪಿಗಳ ಬಿಡುಗಡೆ ಪ್ರಕ್ರಿಯೆ ವಿಳಂಬವಾಗಲಿದೆ. 48 ಜನ ಜಾಮೀನುದಾರರನ್ನು ಕಾಂಗ್ರೆಸ್ ಹುಡುಕುತ್ತಿದೆ. ಬಹುತೇಕ ಸೋಮವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.
+ There are no comments
Add yours