ಪುನಃ ಮೂವರ ಸಾವು; ಜಿಲ್ಲೆಯಲ್ಲಿ ಕೊರೋನಾ ರಣ ಕೇಕೆ

1 min read

ತುಮಕೂರು ನ್ಯೂಸ್. ಇನ್
Tumkurnews.in

ಭಾನುವಾರ ಜಿಲ್ಲೆಯ ಮೂವರನ್ನು ಬಲಿ ಪಡೆದಿದ್ದ ಕೋವಿಡ್ 19, ಸೋಮವಾರ ಕೂಡ ಮೂವರನ್ನು ಬಲಿ ಪಡೆದಿದ್ದು, ಜಿಲ್ಲೆಯಲ್ಲಿ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿದೆ.
*
ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 78 ಕೋವಿಡ್ 19 ಪಾಸಿಟಿವ್ ಕೇಸ್ ಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 777ಕ್ಕೆ ಏರಿಕೆಯಾಗಿದೆ ಎಂದು ಡಿಎಚ್‌‌ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
*
ತಾಲೂಕುವಾರು ವಿವರ:
ತುಮಕೂರು- 17
ಕುಣಿಗಲ್- 24
ಪಾವಗಡ- 10
ಮಧುಗಿರಿ- 10
ಕೊರಟಗೆರೆ- 8
ಶಿರಾ- 6
ತುರುವೇಕೆರೆ- 1
ತಿಪಟೂರು- 2
ಚಿಕ್ಕನಾಯಕನಹಳ್ಳಿ- 0
ಗುಬ್ಬಿ- 0
ಒಟ್ಟು- 78
*
3 ಜನ ಸಾವು:
ಜಿಲ್ಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ. ಕುಣಿಗಲ್ ನಗರದ ಪುರುಷ(40) ಹಾಗೂ ಶಿರಾ ಜಮೀಯ ನಗರದ ವೃದ್ಧೆ(60) ಜು.20 ರಂದು ಹಾಗೂ ತುಮಕೂರು ನಗರದ ಕೆಎಚ್ ಬಿ ಕಾಲೋನಿಯ ಮಹಿಳೆ (59) ಜು.19 ರಂದು ಸಾವನ್ನಪ್ಪಿದ್ದಾರೆ.
ಈತನಕ ಜಿಲ್ಲೆಯಲ್ಲಿ 26 ಜನ ಸಾವನ್ನಪ್ಪಿದ್ದು, 411 ಜನ ಗುಣಮುಖರಾಗಿದ್ದಾರೆ, 340 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

You May Also Like

More From Author

+ There are no comments

Add yours