ಆಗ್ನೇಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್’ನ ಡಿ.ಟಿ‌ ಶ್ರೀನಿವಾಸ್ ಗೆಲುವು?

1 min read

 

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಡಿ.ಟಿ‌ ಶ್ರೀನಿವಾಸ್ ಗೆಲುವು?

Tumkurnews
ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಗೆಲುವಿನತ್ತ ಸಾಗಿದ್ದಾರೆ‌.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ ನಾರಾಯಣ ಸ್ವಾಮಿ ಅವರನ್ನು  ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಸುಮಾರು 1800ಕ್ಕೂ ಅಧಿಕ ಮತಗಳ  ಅಂತರದಿಂದ ಹಿಂದಿಕ್ಕಿರುವ ಡಿ.ಟಿ ಶ್ರೀನಿವಾಸ್ ಅವರು ಮುನ್ನಡೆ ಸಾಧಿಸಿದ್ದಾರೆ. ರಾತ್ರಿ 9 ಗಂಟೆಗಳ ವರೆಗಿನ ಮಾಹಿತಿಯಂತೆ ಮೊದಲ ಪ್ರಾಶಸ್ತ್ಯ ಮತ ಎಣಿಕೆ ಮುಕ್ತಾಯವಾಗಿದ್ದು, ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಆರಂಭವಾಗಿದೆ‌. ರಾತ್ರಿ ಸುಮಾರು 12ಗಂಟೆ ವೇಳೆಗೆ ಅಂತಿಮ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.

ಹಮಾರೆ ಬಾರಾಹ್ ಟ್ರೈಲರ್ ಹಾಗೂ ಸಿನಿಮಾ ನಿಷೇಧ

About The Author

You May Also Like

More From Author

+ There are no comments

Add yours