ತುಮಕೂರಿನಲ್ಲಿ ಲೋಕಾಯುಕ್ತ ದಾಳಿ; ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಲೇಬರ್ ಇನ್ಸ್’ಪೆಕ್ಟರ್

1 min read

Tumkurnews
ತುಮಕೂರು; ಕಾರ್ಮಿಕ ಇಲಾಖೆ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚ ಪಡೆಯುತ್ತಿದ್ದ ಕಾರ್ಮಿಕ ನಿರೀಕ್ಷಕ ಕಿರಣ್ ಕುಮಾರ್’ರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಕಾರ್ಮಿಕ ಇಲಾಖೆ ಕಚೇರಿಯಲ್ಲಿ ವ್ಯಕ್ತಿಯೋರ್ವರಿಂದ 5 ಸಾವಿರ ರೂ., ಲಂಚ ಪಡೆಯುತ್ತಿದ್ದ ವೇಳೆ ಲೇಬರ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಎಸಿಬಿ ರದ್ದಾಗಿ ಲೋಕಾಯುಕ್ತ ಪುನಃ ಆರಂಭವಾದ ಬಳಿಕ ತುಮಕೂರಿನಲ್ಲಿ ನಡೆದ‌ ಮೊದಲ ಕಾರ್ಯಾಚರಣೆ ಇದಾಗಿದ್ದು, ಸರ್ಕಾರಿ ‌ಅಧಿಕಾರಿಗಳು ಬೆಚ್ಚಿ ಬೀಳುವಂತಾಗಿದೆ.

ರಸ್ತೆ ಬದಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ; ಸವಾರ ಸಾವು

About The Author

You May Also Like

More From Author

+ There are no comments

Add yours