ಒಂದೇ ಮನೆಯ ಮೂವರು ಹೆಣ್ಣು ಮಕ್ಕಳು ಆತ್ಮಹತ್ಯೆ

1 min read

ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ‌.

Tumkurnews
ತುಮಕೂರು; ತಂದೆ, ತಾಯಿ ಹಾಗೂ ಅಜ್ಜಿಯ ಸಾವಿನಿಂದಾಗಿ ಅನಾಥರಾಗಿದ್ದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ‌.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಕನಹಾಲ್ ತಾಂಡ್ಯ ಬಳಿ ಘಟನೆ ಸಂಭವಿಸಿದ್ದು, 9 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ರಂಜಿತಾ(24), ಬಿಂದು(21) ಹಾಗೂ ಚಂದನ(18) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕೆಲವು ವರ್ಷಗಳ ಹಿಂದೆ ಈ ಮಕ್ಕಳ ತಂದೆ, ತಾಯಿ ಮೃತರಾಗಿದ್ದರು. ಮಕ್ಕಳನ್ನು ಅಜ್ಜಿ ಸಾಕುತ್ತಿದ್ದರು. ಆದರೆ ಇತ್ತೀಚೆಗೆ ಅಜ್ಜಿಯೂ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಮಕ್ಕಳು ಅನಾಥರಾಗಿದ್ದರು.
ಅಜ್ಜಿಯ ಮರಣದ ಬಳಿಕ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡಿತ್ತು, ಅದರ ನಡುವೆಯೂ ಇಬ್ಬರು ಸಹೋದರಿಯರು ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್’ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ 9 ದಿನಗಳ ಹಿಂದೆ ಮೂರು ಜನ ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.
ಶವ ಕೊಳೆಯಲು ಆರಂಭಿಸಿದ ಬಳಿಕ ಸ್ಥಳೀಯರಿಗೆ ವಿಷಯ ಗೊತ್ತಾಗಿದ್ದು, ಪ್ರಕರಣ ಬಯಲಿಗೆ ಬಂದಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

You May Also Like

More From Author

+ There are no comments

Add yours