ತುಮಕೂರು- ಕುಣಿಗಲ್ ರಸ್ತೆಯಲ್ಲಿ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
Tumkurnews
ತುಮಕೂರು; ಇಲ್ಲಿನ ಕುಣಿಗಲ್ ರಸ್ತೆಯ ಮರಳೂರು ಕೆರೆ ಏರಿ ಮೇಲೆ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಲಾರಿಗೆ ತುಮಕೂರು ಕಡೆಯಿಂದ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಅರ್ಧದಷ್ಟು ಲಾರಿಯ ಕೆಳಗೆ ತೂರಿಕೊಂಡಿದೆ. ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರ ಪುರ ನಿವಾಸಿ ಜಿಯೋ ಮಾರ್ಟ್’ನಲ್ಲಿ ಕೆಲಸ ಮಾಡುವ ಅರುಣ್ ಕುಮಾರ್(32) ಹಾಗೂ ಕೊಡವತ್ತಿ ನಿವಾಸಿ ಮಧು ಸ್ಟೋನ್ ಕ್ರಷರ್’ನಲ್ಲಿ ಕೆಲಸ ಮಾಡುವ ಚೇತನ್(26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
+ There are no comments
Add yours