ಭೀಕರ ಅಪಘಾತ; ತಂದೆ, ಮಗಳು ಸೇರಿ ಮೂವರು ಸಾವು

1 min read

 

ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿ; ತಂದೆ, ಮಗಳು ಸೇರಿ ಮೂವರು ಸಾವು

Tumkurnews
ತುಮಕೂರು; ಜಿಲ್ಲೆಯ ಶಿರಾ ತಾಲ್ಲೂಕಿನ ತರೂರು ಗೇಟ್’ನಲ್ಲಿ ತಡ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ, ಮಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ
ಕಡವಿಗೆರೆ ಗ್ರಾಮದ ರಾಜಣ್ಣ ಎಂಬುವರ ಪುತ್ರ ಲಾರಿ ಚಾಲಕ ಅವಿನಾಶ್ (28) ಹಾಗೂ ಪುತ್ರಿ ಪ್ರಣತಿ(5) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವಿನಾಶ್ ಸಂಬಂಧಿಕ ಕಡವಿಗೆರೆ ಗ್ರಾಮದ ಕಾಟಯ್ಯ ಎಂಬುವರ ಪುತ್ರಿ ಸೌಕ್ಯ(4) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾಳೆ.
ತರೂರು ಗೇಟ್’ನಲ್ಲಿ ತುಮಕೂರು ಕಡೆಗೆ ಬರುತ್ತಿದ್ದ ಅವಿನಾಶ್ ಚಲಾಯಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ನಿಯಂತ್ರಣ ತಪ್ಪಿ ಅಪರಿಚಿತ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ‌. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಾ; ಅಪರಿಚಿತ ವಾಹನ ಡಿಕ್ಕಿ; ವ್ಯಕ್ತಿ ಸಾವು

About The Author

You May Also Like

More From Author

+ There are no comments

Add yours