ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂದು‌ ನೊಂದು ಯುವಕ ಆತ್ಮಹತ್ಯೆ

1 min read

Tumkurnews
ತುಮಕೂರು; ವಿವಾಹವಾಗಲು ಹುಡುಗಿ‌ ಸಿಗಲಿಲ್ಲ ಎಂದು ಬೇಸತ್ತು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೊರಟಗೆರೆ ತಾಲ್ಲೂಕು ತೋವಿ‌ನಕೆರೆ ಹೋಬಳಿ ಜೋನಿಗನಹಳ್ಳಿ ಗ್ರಾಮದ ‌ನಿವಾಸಿ ದಿ.ರಮೇಶ್ ಆಚಾರ್ಯ ಎಂಬುವರ ಪುತ್ರ ಹೇಮಂತ್ ಕುಮಾರ್(28) ಆತ್ಮಹತ್ಯೆಗೆ ಶರಣಾದ ಯುವಕ.

ಅರುಂಧತಿ ಸಿನಿಮಾ ನೋಡಿ ಆತ್ಮಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿ!
ತೋವಿನಕೆರೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಹೇಮಂತ್ ಕುಮಾರ್ ಮದುವೆಯಾಗಲು ಕಳೆದ ನಾಲ್ಕೈದು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದನು. ಆದರೆ ಎಲ್ಲಿಯೂ ಹುಡುಗಿ ಸಿಗುತ್ತಿರಲಿಲ್ಲ. ನೋಡಿದ ಹುಡುಗಿಯರು ಸಣ್ಣಪುಟ್ಟ ಕಾರಣಗಳಿಂದಾಗಿ ತಿರಸ್ಕೃತಗೊಳ್ಳುತ್ತಿದ್ದರು‌. ಇದರಿಂದಾಗಿ ಹೇಮಂತ್ ಅಪಾರವಾಗಿ ನೊಂದುಕೊಂಡಿದ್ದನು.

ತವರಿಗೆ ಹೋದ ಪತ್ನಿ ನೆನೆದು ಆತ್ಮಹತ್ಯೆ!
ನೋಡಲು ಆಕರ್ಷಕವಾಗಿದ್ದು, ಸ್ವಂತ ದುಡಿಮೆ ಇದ್ದರೂ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದ ಹೇಮಂತ್ ಕುಮಾರ್, ಮನೆಯಲ್ಲಿ ಯಾರೂ‌ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KSRTC; ತುಮಕೂರು ವಿಭಾಗಕ್ಕೆ ಒಂದೇ ದಿನ 1 ಕೋಟಿ ಆದಾಯ!

About The Author

You May Also Like

More From Author

+ There are no comments

Add yours