KSRTC ನಿಲ್ದಾಣದಲ್ಲಿ ನಿಲ್ಲದ ಕಳ್ಳರ ಹಾವಳಿ; ಇಂದು ಒಂದೇ ದಿನ 1.50 ಲಕ್ಷ ರೂ. ಪಿಕ್ ಪಾಕೆಟ್!

1 min read

 

Tumkurnews
ತುಮಕೂರು; ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದ್ದು, ಬುಧವಾರ ವ್ಯಕ್ತಿಯೋರ್ವರು 1.50 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಗುಬ್ಬಿ ತಾಲ್ಲೂಕು ಚಿನ್ನಯ್ಯನಪಾಳ್ಯ‌ ನಿವಾಸಿ ಆನಂದಪ್ಪ ಹಣ ಕಳೆದುಕೊಂಡವರು.
ಗುಬ್ಬಿ ಅಂಕಣದಲ್ಲಿ ಸಂಜೆ ಬಸ್ ಹತ್ತುವ ವೇಳೆ ಆನಂದಪ್ಪ ಅವರ ಜೇಬಿನಲ್ಲಿದ್ದ 1.50 ಲಕ್ಷ ರೂ.ಗಳನ್ನು ಕಳ್ಳರು ಎಗರಿಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ‌.

KSRTC ಬಸ್ ಅಪಘಾತ; ಶಿರಾದಲ್ಲಿ ತಪ್ಪಿದ ಭಾರಿ‌ ಅನಾಹುತ
ತುಮಕೂರು ಬಸ್ ನಿಲ್ದಾಣದಲ್ಲಿ ದಿನೇದಿನೆ ಕಳ್ಳರ ಕಾಟ ಹೆಚ್ಚಾಗುತ್ತಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ಬುಧವಾರ ಸಂಜೆ ನಡೆದ ಘಟನೆ ಪ್ರಯಾಣಿಕಲ್ಲಿ‌ ಮತ್ತಷ್ಟು ಭಯ ಮೂಡಿಸಿದೆ. ನಿಲ್ದಾಣಾಧಿಕಾರಿ ಕಚೇರಿ ಮುಂದೆಯೇ ಕಳ್ಳರು ತಮ್ಮ ಕೈ ಚಳಕ ತೋರಿಸಿರುವುದು ಆತಂಕ ಹೆಚ್ಚಿಸಿದ್ದು, ಪೊಲೀಸರು ಕೂಡಲೇ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!

About The Author

You May Also Like

More From Author

+ There are no comments

Add yours