Tumkur News
ತುಮಕೂರು: ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಿದ್ದರೂ ಸಹ ಬಂಧನಕ್ಕೆ ಒಳಗಾಗಿಸಿದ್ದಾರೆ. ಕಳೆದ ಏಳು ದಿನಗಳಿಂದ ಕಾನೂನು ಬಂಧನದಡಿಯಲ್ಲಿ ಇದ್ದಾರೆ. ನ್ಯಾಯ ಒದಗಿಸಬೇಕಾದ ಸರ್ಕಾರ ನ್ಯೂಟ್ರಲ್ ಆಗಿರಬೇಕು. ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂದು ಡಾ. ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.
ತುಮಕೂರು ವಿವಿ ಪಠ್ಯದಲ್ಲಿ ಅಂಬೇಡ್ಕರ್ ವಿಚಾರಕ್ಕೆ ಕತ್ತರಿ; ಪರಮೇಶ್ವರ್ ಅಸಮಧಾನ
ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನೀತಿಗೆ ಕಾಂಗ್ರೆಸ್ ಖಂಡಿಸುತ್ತದೆ. ಪೊಲೀಸರು ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.
NSUI ಕಾರ್ಯಕರ್ತರ ಬಂಧನಕ್ಕೆ ಪರಮೇಶ್ವರ್ ತೀವ್ರ ಅಸಮಧಾನ
ಒಂದನೇ ತಾರೀಕು ವಿದ್ಯಾರ್ಥಿ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಪಠ್ಯಪುಸ್ತಕದಲ್ಲಿ ಲೋಪದೋಷ ಇದ್ದ ಕಾರಣ ಪ್ರತಿಭಟನೆ ಮಾಡಲಾಗಿತ್ತು. ಕಾನೂನಿನ ಬಂಧನದಿಂದ ಜನರನ್ನು ನಿಯಂತ್ರಿಸಲಾಗಲ್ಲ ಎಂದರು.
ಮೋರಿಯಲ್ಲಿ ಸಿಲುಕಿದ ಗೋವನ್ನು ರಕ್ಷಿಸಿದ ಭಜರಂಗದಳ ಕಾರ್ಯಕರ್ತರು
ಅಂಬೇಡ್ಕರ್ ಸಂವಿಧಾನ ಶಿಲ್ಲಿಯಲ್ಲ, ಬಸವಣ್ಣ ವಿಶ್ವ ಗುರು ಅಲ್ಲ ಎಂದಾಗ ಈ ರೀತಿ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಜೈಲಿನಲ್ಲಿದ್ದವರಿಗೆ ಹೆದರದಂತೆ ಧ್ರೈರ್ಯ ಹೇಳಿದ್ದೀನಿ ಎಂದು ಹೇಳಿದರು.
+ There are no comments
Add yours