ಐಟಿಎಫ್‌ ಡಬ್ಲ್ಯೂ 35 ತುಮಕೂರು ಓಪನ್‌: ಭಾರತದ ಸವಾಲು ಮುನ್ನಡೆಸಿದ ಮಾಧುರಿಮಾ

Tumkur News
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues,...
2 Min Read

Tumkur news

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಟೆನಿಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಧಾನ ಸುತ್ತಿನೊಂದಿಗೆ ಆರಂಭವಾದ ಐಟಿಎಫ್‌ಡಬ್ಲ್ಯು 35 ತುಮಕೂರು ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತೀಯ ಆಟಗಾರ್ತಿಯರು ಸಿಂಗಲ್ಸ್‌ ಮತ್ತು ಡಬಲ್ಸ್‌ ಎರಡರಲ್ಲೂ ಮುನ್ನಡೆ ಸಾಧಿಸಿದ್ದಾರೆ.

ಭಾರತದ ಸವಾಲನ್ನು ಮುನ್ನಡೆಸಿದ ಮಧುರಿಮಾ ಸಾವಂತ್‌, ಮೂರು ಸೆಟ್‌ಗಳ ಹೋರಾಟದಲ್ಲಿ ಗೆದ್ದು ಬೀಗಿದರು. ಸಾವಂತ್‌ ಅವರು 6-2, 3-6, 6-1 ಸೆಟ್‌ಗಳಿಂದ ಮಾರಿಯಾ ಮಿಖೈಲೋವಾ ಅವರನ್ನು ಸೋಲಿಸಿ 16ರ ಸುತ್ತಿಗೆ ಲಗ್ಗೆ ಹಾಕಿದರು.

ಮಧುರಿಮಾ, ಆತ್ಮವಿಶ್ವಾಸದ ಬೇಸ್‌ ಲೈನ್‌ ಆಟ ಮತ್ತು ತೀಕ್ಷ್ಮವಾದ ಚಲನೆಯೊಂದಿಗೆ ಆರಂಭಿಕ ಸೆಟ್‌ನಲ್ಲಿಓಡಿದ ನಂತರ, ಅವರು ಎರಡನೇ ಸೆಟ್‌ನಲ್ಲಿ ಮಿಖೈಲೋವಾ ಅವರಿಂದ ಬಲವಾದ ಪ್ರತಿಕ್ರಿಯೆಯನ್ನು ಎದುರಿಸಿದರು. ಅಲ್ಲಿರಷ್ಯಾದ ಆಟಗಾರ್ತಿ ಡ್ರಾ ಮಾಡಲು ತನ್ನ ಮಟ್ಟವನ್ನು ಹೆಚ್ಚಿಸಿದರು. ಆದಾಗ್ಯೂ, ನಿರ್ಣಾಯಕ ಪಂದ್ಯದಲ್ಲಿಭಾರತೀಯ ಆಟಗಾರ್ತಿ ಬೇಗನೆ ಲಯ ಕಂಡುಕೊಂಡರು. ಆಕ್ರಮಣಕಾರಿ ಶಾಟ್‌ ಮೇಕಿಂಗ್‌ ಮತ್ತು ಸ್ಥಿರತೆಯೊಂದಿಗೆ ಪಂದ್ಯವನ್ನು ಶೈಲಿಯಲ್ಲಿ ಮುಕ್ತಾಯಗೊಳಿಸಿದರು.

ಮತ್ತೊಂದು ಅಖಿಲ ಭಾರತ ಪಂದ್ಯದಲ್ಲಿ ಸಂದೀಪ್ತಿ ಸಿಂಗ್‌ ರಾವ್‌ 6-3, 6-4 ಸೆಟ್‌ಗಳಿಂದ ಯಶಸ್ವಿನಿ ಪನ್ವಾರ್‌ ಅವರನ್ನು ಮಣಿಸಿದರು. ಪೂಜಾ ಇಂಗಳೆ ಕೂಡ ಮೂರು ಸೆಟ್‌ಗಳ ಕಠಿಣ ಪಂದ್ಯದಲ್ಲಿ ಡ್ಯಾನಿಕಾ ಫರ್ನಾಂಡೊ ಅವರನ್ನು 7-5, 1-6, 6-4 ಸೆಟ್‌ಗಳಿಂದ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಸೋನಾಲ್‌ ಪಾಟೀಲ್‌ 6-0, 6-3 ಸೆಟ್‌ಗಳಿಂದ ಅರ್ಹತಾ ಆಟಗಾರ್ತಿ ಸ್ನಿಗ್ಧಾ ಕಾಂತಾ ಅವರನ್ನು ಮಣಿಸಿ ಅಂತಿಮ 16 ರ ಘಟ್ಟಕ್ಕೆ ಪ್ರವೇಶಿಸಿದರು.

ಕ್ಸೆನಿಯಾ ಲಸ್ಕುಟೋವಾ 6-3, 7-6 (2) ಸೆಟ್‌ಗಳಿಂದ ಏಳನೇ ಶ್ರೇಯಾಂಕಿತ ಮಿಚಿಕಾ ಒಜೆಕಿ ವಿರುದ್ಧ ಗೆಲುವು ಸಾಧಿಸಿದರೆ, ಐದನೇ ಶ್ರೇಯಾಂಕಿತ ಎಲಿನಾ ನೆಪ್ಲಿ6-4, 6-1 ಸೆಟ್‌ಗಳಿಂದ ಹರ್ಷಿಣಿ ಎನ್‌. ನಾಗರಾಜ್‌ ಅವರನ್ನು ಮಣಿಸಿದರು.

ಮಹಿಳಾ ಡಬಲ್ಸ್‌ ರೌಂಡ್‌ ಆಫ್‌ 16 ರಲ್ಲಿ ಭಾರತದ ಆವೇಗ ಮುಂದುವರೆಯಿತು. ಅಗ್ರ ಶ್ರೇಯಾಂಕಿತ ವೈದೇಹಿ ಚೌಧರಿ ಮತ್ತು ಜುಝಾನ್ನಾ ಪಾವ್ಲಿಕೋವ್ಸ್ಕಾ ಜೋಡಿ 6-1, 6-2 ಸೆಟ್‌ಗಳಿಂದ ಮಾರಿಯಾ ಮಿಖೈಲೋವಾ ಮತ್ತು ಸಂದೀಪ್ತಿ ಸಿಂಗ್‌ ರಾವ್‌ ಅವರನ್ನು ಸೋಲಿಸಿತು.

ನಾಲ್ಕನೇ ಶ್ರೇಯಾಂಕದ ಅಖಿಲ ಭಾರತ ಜೋಡಿ ಶ್ರವ್ಯಾ ಶಿವಾನಿ ಚಿಲಕಲಪುಡಿ ಮತ್ತು ಝೀಲ್‌ ದೇಸಾಯಿ 6-0, 6-2 ಸೆಟ್‌ಗಳಿಂದ ಯಶಸ್ವಿನಿ ಪನ್ವಾರ್‌ ಮತ್ತು ಬೇಲಾ ತಮ್ಹಾಂಕರ್‌ ಅವರನ್ನು ಸೋಲಿಸಿದರು.

ಡಬಲ್ಸ್‌ನಲ್ಲಿ ಐಶ್ವರ್ಯಾ ಜಾಧವ್‌ ಮತ್ತು ಆಕೃತಿ ನಾರಾಯಣ್‌ ಸೊಂಕುಸಾರೆ ಜೋಡಿ 6-4, 7-5 ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಅರಿನಾ ಅರಿಫುಲ್ಲಿನಾ ಮತ್ತು ಎಕಟೆರಿನಾ ಯಾಶಿನಾ ಅವರನ್ನು ಸೋಲಿಸಿದರು. ಶ್ರೀಣಿತಿ ಚೌಧರಿ ಮತ್ತು ಮೇಘನಾ ಜಿ ಡಿ ಅವರು ಕ್ಸೆನಿಯಾ ಲಾಸ್ಕುಟೋವಾ ಮತ್ತು ಎಲಿನಾ ನೆಪ್ಲಿ ವಿರುದ್ಧ ಸೋಲನುಭವಿಸಿದಾಗ ತವರಿನ ತಂಡಕ್ಕೆ ಏಕೈಕ ಹಿನ್ನಡೆ ಉಂಟಾಯಿತು.

ಇದಕ್ಕೂ ಮುನ್ನ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್‌, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌, ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕೆ.ವಿ, ಕರ್ನಾಟಕ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಕೆ.ಗೋವಿಂದರಾಜ್‌ ಮತ್ತಿತರರು ಅದ್ದೂರಿಯಿಂದ ಪಂದ್ಯಾವಳಿಯನ್ನು ಉದ್ಘಾಟಿಸಿದರು.

Share This Article
Follow:
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues, politics, social developments, and ground-level reporting, he has built a reputation for delivering accurate and impactful stories that connect with the common people. He actively covers current affairs, civic issues, crime reports, political events, cultural programs, and human-interest stories with a commitment to ethical journalism. His reporting style focuses on clarity, credibility, and public awareness, making his work relatable and informative to readers across Karnataka. Ashok R.P. believes journalism is a powerful medium to raise public voice and strengthen democracy through responsible reporting and factual storytelling. Special Interests: * Regional & Political News * Public Interest Stories * Social Awareness Reporting * Ground Reality Journalism * Digital Media & News Publishing
Leave a Comment