ತುಮಕೂರು: ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ
Tumkurnews
ತುಮಕೂರು: ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ನಿತ್ಯ ದಾಸೋಹ ನಿಧಿ ಟ್ರಸ್ಟ್ ವತಿಯಿಂದ ತತ್ವ ಫೌಂಡೇಷನ್ಸ್ ಸಹಯೋಗದೊಂದಿಗೆ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸಿದ್ಧಗಂಗಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಅವರು ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳ ಪರದಾಟ: ಇಡಿಸಿಎಸ್ ಬೇಜವಬ್ದಾರಿ
ಈ ಸಂದರ್ಭದಲ್ಲಿ ಪ್ರಾಂಶುಪಾಲ ದಕ್ಷಿಣಮೂರ್ತಿ, ಡಾ.ಡಿ.ಎನ್ ಯೋಗೀಶ್ವರಪ್ಪ, ಪತ್ರಕರ್ತ ಟಿ.ಎನ್. ಮಧುಕರ್, ತತ್ವ ಫೌಂಡೇಷನ್ ಅಧ್ಯಕ್ಷ ಬಿ.ಆರ್ ಉಮೇಶ್, ಕಾರ್ಯದರ್ಶಿ ರಕ್ಷಿತ್, ಡಾ. ನಂಜುಂಡಸ್ವಾಮಿ, ನಟರಾಜು ಮತ್ತಿತರರು ಭಾಗವಹಿಸಿದ್ದರು.
+ There are no comments
Add yours