ತುಮಕೂರು: 26 ಭಿಕ್ಷುಕರು ನಿರಾಶ್ರಿತ ಕೇಂದ್ರಕ್ಕೆ
Tumkurnews
ತುಮಕೂರು: ನಿರಾಶ್ರಿತರ ಪರಿಹಾರ ಕೇಂದ್ರದಿಂದ ಜುಲೈ 25ರಂದು 10 ಹಾಗೂ 26ರಂದು 16 ಸೇರಿ ಒಟ್ಟು 26 ಭಿಕ್ಷುಕರಿಗೆ ನಿರಾಶ್ರಿತರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ತುಮಕೂರು: ಸ್ಥಳ ಮಹಜರು ವೇಳೆ ರೌಡಿ ಮನೋಜ್ ಮೇಲೆ ಪೊಲೀಸ್ ಫೈರಿಂಗ್: ವಿಡಿಯೋ
ನಗರದ ರೈಲ್ವೆ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಎಂ.ಜಿ ರಸ್ತೆ, ಮಂಡಿ ಪೇಟೆ, ಸಿದ್ದಗಂಗಾ ಮಠ, ಬಟವಾಡಿ ಬಳಿ ಹಾಗೂ ಗುಬ್ಬಿ ತಾಲ್ಲೂಕಿನ ಹಾಗಲವಾಡಿ, ನಿಟ್ಟೂರಿನಲ್ಲಿದ್ದ ಭಿಕ್ಷುಕರನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಲಾಗಿದೆ. ಭಿಕ್ಷುಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ನಿರಾಶ್ರಿತರ ಕೇಂದ್ರದ ಅಧೀಕ್ಷಕ ಮಾರಪ್ಪ ಹಾಗೂ ಸಿಬ್ಬಂದಿ ಚನ್ನಕೇಶವ, ರಮೇಶ್ ಅವರು ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
+ There are no comments
Add yours