ಭೀಕರ ರಸ್ತೆ ಅಪಘಾತ; ದಂಪತಿಗಳ ದಾರುಣ ಸಾವು

1 min read

ಭೀಕರ ಅಪಘಾತ; ಸಂತೆಗೆ ಹೊರಟಿದ್ದ ದಂಪತಿಗಳ ದಾರುಣ ಸಾವು

Tumkurnews.in
ತುಮಕೂರು; ಆಟೋ ಮತ್ತು ಮಾರುತಿ ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಬ್ಬಿ ತಾಲ್ಲೂಕು ಸಿ.ಎಸ್ ಪುರ ಸಮೀಪದ ಹರಿವೇಸಂದ್ರ ಬಳಿ ಅಪಘಾತ ಸಂಭವಿಸಿದ್ದು, ಮೃತ ದಂಪತಿಗಳು ಗೂಡ್ಸ್ ಆಟೋದಲ್ಲಿ ಕೆ.ಜಿ ಟೆಂಪಲ್ ಸಂತೆಗೆ ವ್ಯಾಪಾರಕ್ಕೆಂದು ತೆರಳುತ್ತಿದ್ದರು. ಅಪಘಾತದ ತೀವ್ರತೆಗೆ ಆಟೋ ಚಲಾಯಿಸುತ್ತಿದ್ದ ಕಲ್ಲೂರು ಗ್ರಾಮದ ನಿವಾಸಿ ನಾಗರಾಜ್(60) ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಪತ್ನಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಸ್ಥಳಕ್ಕೆ ಸಿ.ಎಸ್ ಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತ ದೇಹಗಳನ್ನು ಸಾಗಿಸಲಾಗಿದೆ. ಒಟ್ಟಿನಲ್ಲಿ ದಂಪತಿಗಳು ಬದುಕಿನ ಸಂತೆಯನ್ನು ಜೊತೆಯಾಗಿಯೇ ಮುಗಿಸಿದ್ದು ಮಾತ್ರ ವಿಪರ್ಯಾಸ.

ಇನ್ಮುಂದೆ ವಾರದಲ್ಲಿ 2 ದಿನ ಬ್ಯಾಂಕ್ ರಜೆ?!; ಏನಿದು ಸುದ್ದಿ?

About The Author

You May Also Like

More From Author

+ There are no comments

Add yours