ನಗರ ವ್ಯಾಪ್ತಿಯ ಹಲವೆಡೆ ಜೂ.28ರ ವರೆಗೆ ವಿದ್ಯುತ್ ವ್ಯತ್ಯಯ
Tumkurnews
ತುಮಕೂರು; ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಜೂನ್ 7 ರಿಂದ ಜೂನ್ 28ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಶ್ರೀರಾಮನಗರ, ಹೊರಪೇಟೆ, ವಿವೇಕಾನಂದ ರಸ್ತೆ, ಕೆ.ಆರ್.ಬಡಾವಣೆ, ಬಾರ್ಲೈನ್, ಎಂಜಿ ರಸ್ತೆ, ಅಶೋಕರಸ್ತೆ, ಕೋತಿತೋಪು, ಪಾಂಡುರಂಗನಗರ, ಜಾಮೀಯಾ ಮಸೀದಿ, ಅಗ್ರಹಾರ, ಕ್ರಿಶ್ಚಿಯನ್ ಸ್ಟ್ರೀಟ್, ಗೋವಿಂದ ನಗರ, ರಿಂಗ್ ರಸ್ತೆ, ಗುಬ್ಬಿ ಗೇಟ್, ಕುಂಟಮ್ಮನ ತೋಟ, ದಿಬ್ಬೂರು, ಬಂಡೇ ಮನೆ ಚೌಟ್ರಿ, ಹೆಚ್ಪಿ ಪೆಟ್ರೋಲ್ ಬಂಕ್, ಬಿ.ಜಿ.ಪಾಳ್ಯ ಸರ್ಕಲ್, ಯುಜಿಡಿ, ದಾನಾ ಪ್ಯಾಲೇಸ್ ಹಿಂಭಾಗ, ಈದ್ಗಾಮೊಹಲ್ಲ, ಪಿ.ಹೆಚ್.ಕಾಲೋನಿ, ವಿನೋಬ ನಗರ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಜೈಪುರ, ತಿಲಕ್ ಪಾರ್ಕ್, ಕೆ.ಹೆಚ್.ಬಿ.ಕಾಲೋನಿ, ಕಾಲ್ಟ್ಯಾಕ್ಸ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
+ There are no comments
Add yours