ಜನರಿಗೆ ದುರಾಭಿಮಾನ ಹೆಚ್ಚಾಗಿದೆ; ಕೃಷಿ ಮೇಳಕ್ಕೆ ಬಾರದವರ ವಿರುದ್ಧ ಅಟವಿಶ್ರೀ ಬೇಸರ

1 min read

Tumkurnews
ತುಮಕೂರು; ಜನರಿಗೆ ಸ್ವಾಭಿಮಾನಕ್ಕಿಂತಲೂ ದುರಾಭಿಮಾನ ಹೆಚ್ಚಾಗಿದೆ, ಹಾಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವುದಿಲ್ಲ ಎಂದು ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಜಂಗಮ ಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಕ್ಷೇತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ಸಮಾರಂಭಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಈ ಮೇಳಕ್ಕೆ 5 ರಿಂದ 10 ಸಾವಿರ ಜನ ಸೇರಬೇಕಿತ್ತು‌. ಜನತೆ ಸದ್ವಿನಿಯೋಗ ಆಗಲಿಲ್ಲ. ಅಭಿಮಾನದ ಕೊರತೆಯಿಂದ ಜನ ಸೇರಲಿಲ್ಲ. ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ. ಇಂತಹ ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.

ನ.4ರಿಂದ ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಜಂಗಮ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಚಿಕ್ಕತೊಟ್ಲುಕೆರೆ 1000 ಮನೆಗಳಿರುವ ಊರು, ಸ್ವಾಭಿಮಾನಕ್ಕಿಂತ ದುರಾಭಿಮಾನ ಹೆಚ್ಚಾಗಿ, ಕಾರ್ಯಕ್ರಮದತ್ತ ಜನ ಬಂದಿಲ್ಲ ಎಂದು ತಮ್ಮ ಅಸಮಾಧಾನ ತೋಡಿಕೊಂಡರು. ಮಠ ಬೆಳೆಯುವುದರ ಜೊತೆಗೆ, ಜನರ ಪರಿವರ್ತನೆಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ರಾಜ್ಯದಲ್ಲಿ 3000 ಸಾವಿರ ಮಠಾಧೀಶ್ವರಿದ್ದೇವೆ. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಕೊರಟಗೆರೆ ಶಾಸಕ ಹಾಗೂ ಕಾರ್ಯಕ್ರಮದ ಮಹಾಪೋಷಕ ಡಾ.ಜಿ ಪರಮೇಶ್ವರ್, ನಾನು ಈ ಕಾರ್ಯಕ್ರಮವನ್ನು ರಾಜಕೀಯ ಉದ್ದೇಶಕ್ಕಾಗಿ ಆಯೋಜಿಸಿಲ್ಲ. ಶ್ರೀ ಅಟವಿ ಶಿವಲಿಂಗ ಸ್ವಾಮೀಜಿಗಳ ಚಿಂತನೆಗೆ ಪೂರಕವಾಗಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದೇನೆಯೇ ಹೊರತು ರಾಜಕೀಯ ಲಾಭಕ್ಕಾಗಿ ಅಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾರರ ಮುಂದೆ ಹೋಗಿ ಕೈ ಮುಗಿಯುತ್ತೇನೆ. ಮತ ನೀಡುವುದು, ಬೀಡುವುದು ಅವರಿಗೆ ಬಿಟ್ಟ ವಿಚಾರ ಎಂದರು.
ಬಿಜೆಪಿ ಮುಖಂಡ ಎಸ್.ಪಿ ಚಿದಾನಂದ ಮಾತನಾಡಿ,100 ಪುಣ್ಯ ಕ್ಷೇತ್ರಗಳ ದರ್ಶನಕ್ಕಿಂತ ಒಂದು ಗೋಪೂಜೆ ನಡೆಸುವುದು ಹೆಚ್ಚು ಪುಣ್ಯದ ಕೆಲಸ ಎಂದು ಹಿಂದು ಸಂಸ್ಕೃತಿಯಲ್ಲಿ ನಂಬಿದ್ದೇವೆ. ಇಂದೊಂದು ಜಾತ್ಯಾತೀತ, ಪಕ್ಷಾತೀತ ಕಾರ್ಯಕ್ರಮವಾಗಿದೆ. ಜನರು ಹೆಚ್ಚು, ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಅಟವಿ ಸುಕ್ಷೇತ್ರ ಗೋಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಟಿ.ಬಿ.ಶೇಖರ್ ಮಾತನಾಡಿ, 650 ವರ್ಷಗಳ ಹಿಂದೆ ಓಂಕಾರೇಶ್ವರ ಸ್ವಾಮೀಜಿಗಳಿಂದ ಆರಂಭವಾದ ಅಟವಿ ಸ್ವಾಮೀಜಿಗಳು, 1998ರಲ್ಲಿ ಶ್ರೀಅಟವಿ ಶಿವಲಿಂಗಸ್ವಾಮೀಜಿ ಅಧಿಕಾರ ವಹಿಸಿಕೊಂಡ ನಂತರ ಹಂತ ಹಂತವಾಗಿ ಬೆಳೆದಿದೆ. ಹಾಸ್ಟೆಲ್, ಗೋಶಾಲೆ, ವಿಭೂತಿ ತಯಾರಿಕಾ ಘಟಕ, ಆಯುರ್ವೇದ ಚಿಕಿತ್ಸಾಲಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯೋಗ ಶಾಲೆ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಬೇಕೆಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ನೆರವೇರುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವೀರಶೈವ ಸಮಾಜದ ಉಪಾಧ್ಯಕ್ಷ ಚಂದ್ರಮೌಳಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಸೀಲ್ದಾರ್ ಮೋಹನ್ ಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅವಳಿ ಮಕ್ಕಳು, ತಾಯಿ ಸಾವು ಪ್ರಕರಣ; ವೈದೈ, ಮೂವರು ನರ್ಸ್ ಅಮಾನತು
ಕಾರ್ಯಕ್ರಮಕ್ಕೂ ಮೊದಲು ಕೃಷಿ, ತೋಟಗಾರಿಕೆ, ರೇಷ್ಮೆ,ಮೀನುಗಾರಿಕೆ ಹಾಗು ಪಶುಸಂಗೋಪನಾ ಇಲಾಖೆವತಿಯಿಂದ ಆಯೋಜಿಸಿದ್ದ ಕೃಷಿ ಮೇಳವನ್ನು ಡಾ.ಜಿ.ಪರಮೇಶ್ವರ್ ಉದ್ಘಾಟಿಸಿ, ವಿವಿಧ ಇಲಾಖೆಯ ಮಳಿಗೆಯನ್ನು ವೀಕ್ಷಿಸಿದರು.

About The Author

You May Also Like

More From Author

+ There are no comments

Add yours