ತುಮಕೂರಿನಲ್ಲಿ ಭಗವದ್ವಜ ಕಟ್ಟಿದ್ದಕ್ಕೆ ಕ್ಯಾತೆ; ಹಿಂದೂಗಳ ಮೇಲೆ ಹಲ್ಲೆ; ವಿಡಿಯೋ

1 min read

 

Tumkurnews
ತುಮಕೂರು; ಬಡಾವಣೆಯಲ್ಲಿ ಭಗವದ್ವಜ ಕಟ್ಟಿದ್ದಕ್ಕೆ ಹಿಂದೂ ಧರ್ಮದ ಯುವಕನ ಮೇಲೆ ಮುಸ್ಲೀಮರು ಹಲ್ಲೆ ಮಾಡಿರುವ‌ ಘಟನೆ ನಗರದಲ್ಲಿ ನಡೆದಿದೆ.
ನಗರದ ದಿಬ್ಬೂರು ಕಾಲೋನಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದ್ದು, ಹಿಂದೂ ಯುವಕ ಏಳುಮಲೈ ಹಾಗೂ ಆತನ ತಾಯಿ ಚೆಲುವಮ್ಮ ಹಲ್ಲೆಗೊಳಗಾದವರು.
ದಿಬ್ಬೂರು ಕಾಲೋನಿಯಲ್ಲಿ ಗಣೇಶೋತ್ಸವ ನಿಮಿತ್ತ ಕೇಸರಿ ಬಂಟಿಂಗ್ಸ್ ಹಾಗೂ ಭಗವದ್ವಜಗಳನ್ನು ಕಟ್ಟಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ಮುಸ್ಲಿಂ ಯುವಕರು ಭಗವದ್ವಜ ತೆರವುಗೊಳಿಸುವಂತೆ ಕ್ಯಾತೆ ತೆಗೆದಿದ್ದರು. ಹಿಂದೂ ಯುವಕರು ಇದಕ್ಕೆ ಕ್ಯಾರೆ ಎಂದಿರಲಿಲ್ಲ.‌ ಇದರಿಂದಾಗಿ ಪುನಃ ಜಗಳ ತೆಗೆದ ಕಿಡಿಗೇಡಿಗಳು ಹಿಂದೂ ಸಮುದಾಯದ ತಾಯಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾರೆ.

ಓಮ್ನಿ ಕಾರಿನಲ್ಲಿ ಸಜೀವ ದಹನವಾದ ವ್ಯಕ್ತಿ; ಅಪಘಾತ? ಕೊಲೆ?; ಈ ವಿಡಿಯೋದಲ್ಲಿದೆ ಸುಳಿವು!
ಬಿಗುವಿನ ವಾತಾವರಣ; ಘಟನೆ ನಡೆದ ದಿಬ್ಬೂರಿನಲ್ಲಿ ಕಳೆದ ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಭಜರಂಗದಳದ ಜಿಲ್ಲಾ ಮುಖಂಡ ಮಂಜು ಭಾರ್ಗವ್ ಮತ್ತಿತರರು ತೆರಳಿ ಘಟನೆಯ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಹಲ್ಲೆಕೋರರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ದೇಶಾದ್ಯಂತ ಪಿಎಫ್ಐ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ
ಆಸ್ಪತ್ರೆಗೆ ದಾಖಲು; ಹಲ್ಲೆಗೊಳಗಾದವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

You May Also Like

More From Author

+ There are no comments

Add yours