ಗುಬ್ಬಿ ಕ್ಷೇತ್ರದಲ್ಲಿ ನಿಂತು ನೋಡಿ, ನಿಮಗೊಂದು ಗತಿ ಕಾಣಿಸುತ್ತೇವೆ; ಎಚ್ಡಿಕೆ ವಿರುದ್ಧ ವಾಸು ಅಭಿಮಾನಿಗಳ ಗುಡುಗು!

1 min read

Tumkur News
ತುಮಕೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶ್ರೀನಿವಾಸ್ ಬೆಂಬಲಿಗರು ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಪ್ರತಿಭಟನೆ ಮಾಡಿದರು.

ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್

ಎಸ್.ಆರ್. ಶ್ರೀನಿವಾಸ್ ಅಭಿಮಾನಿಗಳು ಧಿಕ್ಕಾರದ ಘೋಷಣೆ ಕೂಗುತ್ತಾ, ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು.

ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!

ಅಭಿಮಾನಿಗಳು ಅಪ್ಪ, ಮಕ್ಕಳ ಕುಟುಂಬ ರಾಜಕಾರಣಕ್ಕೆ ಧಿಕ್ಕಾರ. ಎರಡು ನಾಲಿಗೆ ಇರುವ ಮಾಜಿ ಸಿಎಂ ಇವರು. ಹತ್ತು ಕೋಟಿ ಕಾಸು ಕೊಡುವವನಿಗೆ ಟಿಕೆಟ್ ಕೊಡುವ ಪಾರ್ಟಿ ನಿಮ್ಮದು ಎಂದು ಹೇಳಿದರು.

ಯುಟರ್ನ್ ಕುಮಾರ ಕಾಣೆಯಾಗಿದ್ದಾರೆ!

ಗುಬ್ಬಿಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಿ. ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಲಿಲ್ಲ ಅಂದ್ರೆ ಕೇಳಿ. ರಾಮನಗರದಲ್ಲೋ, ಚನ್ನಪಟ್ಟಣದಲ್ಲೋ ರಾಜಕಾರಣ ಮಾಡೋದಲ್ಲ, ಬನ್ನಿ ಗುಬ್ಬಿಯಲ್ಲಿ ರಾಜಕಾರಣ ಮಾಡಿ ತೋರಿಸಿ ಓಪನ್ ಚಾಲೆಂಜ್ ಮಾಡಿದರು.

ಕುಮಾರಸ್ವಾಮಿಗೆ‌ ಪಕ್ಷ ನಡೆಸುವ ಯೊಗ್ಯತೆ ಇಲ್ಲ: ಎಸ್.ಆರ್. ಶ್ರೀನಿವಾಸ್

ಹಿಂದುಳಿದವರನ್ನ, ಅಲ್ಪಸಂಖ್ಯಾತರನ್ನ, ದಲಿತರನ್ನ ಇಟ್ಟುಕೊಂಡು ಯಾವತ್ತಾದ್ರೂ ರಾಜಕಾರಣ ಮಾಡಿದ್ದೀರಾ?
ಯಾವ ನೈತಿಕತೆ ಇಟ್ಟುಕೊಂಡು ಮಾತಾತ್ತೀತಿ? ಎಂದು ಕುಮಾರಸ್ವಾಮಿಗೆ ಪ್ರಶ್ನೆ ಕೇಳಿದರು‌.

About The Author

You May Also Like

More From Author

+ There are no comments

Add yours