Tumkur News
ಕೊರಟಗೆರೆ: ಬೆಂಗಳೂರು ಮೂಲದ ವ್ಯಕ್ತಿಯೋರ್ವ ಜಮೀನು ಕೊಂಡುಕೊಳ್ಳಲು ಕಾರಿನಲ್ಲಿ ಇಟ್ಟಿದ್ದ15 ಲಕ್ಷ ಹಣವನ್ನ ಬಿಹಾರ್ ಮೂಲದ ಡ್ರೈವರ್ ಕೊರಟಗೆರೆ ಸರಹದ್ದಿನಲ್ಲಿ ಕದ್ದು ಪರಾರಿಯಾಗಿದ್ದು, ಕೊರಟಗೆರೆ ಪೊಲೀಸ್ ತಂಡ ಆರೋಪಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
3 ವರ್ಷಗಳ ಹಿಂದೆ ಮಹಿಳೆಯನ್ನು ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಬಂಧನ!
ಸತೀಶ್ ಎಂಬ ವ್ಯಕ್ತಿ ಕೊರಟಗೆರೆ ಪಟ್ಟಣದ ಓಲ್ಡ್ ಗೆರೆ ಕ್ರಾಸ್ ನ ಬಳಿ ಜಮೀನು ಕೊಳ್ಳಲು ಅಡ್ವಾನ್ಸ್ ನೀಡುವುದಕ್ಕಾಗಿ ತರಲಾಗಿದ್ದ 15ಲಕ್ಷ ರೂ ಹಣವನ್ನ ಡ್ರೈವರ್ ಬಿಪಿನ್ ಕೊರಟಗೆರೆ ಪಟ್ಟಣದ ಓಲ್ಡ್ ಗೆರೆ ಕ್ರಾಸ್ ನ ಬಳಿ ಕಾರಿನಲ್ಲಿ ಇಟ್ಟ ಹಣವನ್ನ ತೆಗೆದುಕೊಂಡು ಪರಾರಿಯಾಗಿದ್ದ. ಪ್ರಕರಣದ ಆರೋಪಿಯನ್ನ ಇತ್ತೀಚಿಗೆ ಕೊರಟಗೆರೆ ಪೊಲೀಸ್ ತಂಡ ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಕಾಲುಜಾರಿ ಬಾವಿಗೆ ಬಿದ್ದು ಮಹಿಳೆ ಸಾವು
ಡ್ರೈವರ್ ಗೆ ಹಣ ಇದೆ ಕಾರಿನಲ್ಲಿಯೇ ಕುಳಿತುಕೋ ಎಂದು ಹೇಳಿ ಪರಿಚಯಸ್ಥರ ಜೊತೆ ಜಮೀನು ನೋಡಲು ಹೋದಂತಹ ಸಂದರ್ಭದಲ್ಲಿ ಕಾರಿನ ಕಾರನ್ನು ಅಲ್ಲಿಯೇ ಬಿಟ್ಟು 15 ಲಕ್ಷ ರೂಗಳನ್ನ ತೆಗೆದುಕೊಂಡು ಪರಾರಿಯಾಗಿದ್ದ.
KEA ಹುದ್ದೆಗಳಿಗೆ ಅರ್ಜಿ ಆಹ್ವಾನ; 1 ಲಕ್ಷ ವರೆಗೆ ವೇತನ!
ನನ್ನ ಕಾರು ಚಾಲಕನ್ನೇ ತೆಗೆದುಕೊಂಡು ಪರಾರಿಯಾಗಿದ್ದಾನೆ, ಅವನ ಫೋನ್ ನಂಬರ್ ಸ್ವಿಚ್ ಆಫ್ ಆಗಿದೆ ಎಂದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಆತ ಈಗ ಪೊಲೀಸರ ಬಲೆಗೆ ಸಿಲುಕಿದ್ದಾನೆ.
+ There are no comments
Add yours