ಆರ್ಥಿಕ ನೆರವಿಗೆ e-KYC ಅವಧಿ ವಿಸ್ತರಣೆ

1 min read

Tumkur News
ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಆರ್ಥಿಕ ನೆರವು ಪಡೆಯಲು ಬ್ಯಾಂಕ್ ಖಾತೆಗಳಿಗೆ e-KYC ಕಡ್ಡಾಯವಾಗಿರುವುದರಿಂದ ಜುಲೈ 31ರ ವರೆಗೆ e-KYC ಮಾಡಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ ರೂ. 39,100ವರೆಗೆ ವೇತನ ಪಡೆಯುವ ಅವಕಾಶ!
ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ 6000 ರೂ. ವರ್ಗಾವಣೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಇಲ್ಲಿಯವರೆಗೆ ಶೇ.16ರಷ್ಟು ರೈತರು e-KYC ಮಾಡಿಸಿದ್ದು, ಶೇ. 84ರಷ್ಟು ರೈತರು ಬಾಕಿ ಇದ್ದಾರೆ.

ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಮುಂದೂಡಿಕೆ

e-KYC ಮಾಡಿಸಲು ಜು.31ಕಡೆಯ ದಿನವಾದ್ದರಿಂದ ಜಿಲ್ಲೆಯ ರೈತರು ಒಟಿಪಿ‌ ಆಧಾರಿತ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಬಯೊಮಿಟ್ರಿಕ್ ಆಧಾರಿತ e-KYC ಮಾಡಿಸಿ, ಅನುಕೂಲ ಪಡೆಯಬೇಕೆಂದು ಪ್ರಕಟಣೆಯಲ್ಲಿ‌ ತಿಳಿಸಿದೆ.

About The Author

You May Also Like

More From Author

+ There are no comments

Add yours