Tumkurnews
ತುಮಕೂರು; ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಹೆಚ್. ಎಸ್. ರವಿಶಂಕರ್ (ಹೆಬ್ಬಾಕ ರವಿ) ನೇಮಕಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇಮಕ ಮಾಡಿ ಆದೇಶ ಮಾಡಿದ್ದು, ವಿವಿಧ ಜಿಲ್ಲಾಧ್ಯಕ್ಷರ ನೇಮಕದ ಜೊತೆ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕವೂ ನಡೆದಿದೆ.
ನಾಲ್ಕು ತಿಂಗಳ ಹಿಂದೆಯಷ್ಟೇ ಲಕ್ಷ್ಮೀಶ್ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ, ವೈಯಕ್ತಿಕ ಕಾರಣ ನೀಡಿ ಇತ್ತೀಚಿಗೆ ಲಕ್ಷ್ಮೀಶ್ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ತೆರವಾದ ಸ್ಥಾನಕ್ಕೆ ರವಿಶಂಕರ್ ನೇಮಕವಾಗಿದೆ. ಬಿಜೆಪಿಗೆ ಕಳೆದ ಆರು ತಿಂಗಳಿಂದ ಈವರೆಗೂ ಮೂವರು ಜಿಲ್ಲಾಧ್ಯಕ್ಷರ ನೇಮಕವಾಗಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಹೆಬ್ಬಾಕ ರವಿ ನೇಮಕ
- By Ashok RP
- May 19, 2022
- 0 comments
1 min read
+ There are no comments
Add yours