ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯ ಕೊಲೆ?; ಪತಿ, ಅತ್ತೆ ಪೊಲೀಸ್ ವಶಕ್ಕೆ
Tumkurnews
ತುಮಕೂರು; ಕೊಟ್ಟಿಗೆ ಮನೆಯಲ್ಲಿ ಗೃಹಿಣಿಯೋರ್ವಳ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ತುರುವೇಕೆರೆ ತಾಲ್ಲೂಕು ಬಿ.ಸಿ ಕಾವಲ್’ನಲ್ಲಿ ಘಟನೆ ಸಂಭವಿಸಿದ್ದು, ಶ್ಯಾಮಲಾ(28) ಮೃತ ಮಹಿಳೆ.
ಕುತ್ತಿಗೆ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತು ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತ ಶ್ಯಾಮಲಾಳ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಂಡಿನ ಶಿವರ ಪೊಲೀಸರು ಮೃತಳ ಪತಿ ಮಂಜುನಾಥ, ಅತ್ತೆ ಸುನಂದಮ್ಮನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
+ There are no comments
Add yours