ತುಮಕೂರಿನಲ್ಲಿ ಘರ್ಜಿಸಿದ ಜೆಸಿಬಿ: ಒತ್ತುವರಿ ತೆರವುಗೊಳಿಸಿದ ಪಾಲಿಕೆ

1 min read

 

ತುಮಕೂರಿನಲ್ಲಿ ಘರ್ಜಿಸಿದ ಜೆಸಿಬಿ: ಒತ್ತುವರಿ ತೆರವುಗೊಳಿಸಿದ ಪಾಲಿಕೆ

Tumkurnews
ತುಮಕೂರು: ಮಹಾನಗರ ಪಾಲಿಕೆಯಲ್ಲಿ ರಾತ್ರೋರಾತ್ರಿ ಜೆಸಿಬಿಗಳು ಘರ್ಜನೆ ಮಾಡಿದ್ದು, ಪಾಲಿಕೆ ಜಾಗವನ್ನು ಅತಿಕ್ರಮಿಸಿಕೊಂಡು ನಿರ್ಮಿಸಿದ್ದ ಶೆ‌ಡ್‌ಗಳನ್ನು ನೆಲಸಮಗೊಳಿಸಲಾಗಿದೆ.

ಲೋಕಸಭೆ: ಜೂ.4ರಂದು ಮತ ಎಣಿಕೆ: ಏಜೆಂಟ್ ನೇಮಕಕ್ಕೆ ನಿರ್ದೇಶನ
ತುಮಕೂರು ನಗರ ಹೊರವಲಯದ ಎಸ್‌ಎಸ್‌ಐಟಿ ಕಾಲೇಜು ಪಕ್ಕದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪಾಲಿಕೆ ಜಮೀನನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದು, ಶೆಡ್ ನಿರ್ಮಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಒತ್ತುವರಿ ತೆರವುಗೊಳಿಸಿದ್ದಾರೆ.
ತುಮಕೂರ ನಗರದ ಮರಳೂರಿನ ಸರ್ವೆ ನಂಬರ್ 87/1Aರ ಜಮೀನಿನಲ್ಲಿ ಈ ಒತ್ತುವರಿ ತೆರವು ನಡೆದಿದೆ.‌ ಸದರಿ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಕೆಲವು ವ್ಯಕ್ತಿಗಳು ಅತಿಕ್ರಮ ವಾಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಅಕ್ರಮ ಶೆಡ್’ಗಳನ್ನು ತೆರವುಗೊಳಿಸಿದ್ದು, ಪಾಲಿಕೆಯ ಸ್ವತ್ತು ಎಂದು ಬೋರ್ಡ್ ಹಾಕಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗೃಹ ಸಚಿವ ಡಾ.ಜಿ ಪರಮೇಶ್ವರ್’ಗೆ ಜನರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ

About The Author

You May Also Like

More From Author

+ There are no comments

Add yours