ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಕ್ಷಮ್ಯ ಅಪರಾಧ; ಟಿ.ಬಿ ಜಯಚಂದ್ರ ಖಂಡನೆ

1 min read

 

Tumkurnews
ತುಮಕೂರು; ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆದ ಪ್ರಕರಣವನ್ನು ಮಾಜಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಖಂಡಿಸಿದ್ದಾರೆ.
ಈ‌ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕರು ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆಂದು ಮಡಿಕೇರಿಗೆ ತೆರಳಿದಾಗ ಅವರ ಮೇಲೆ ಮೊಟ್ಟೆ ಎಸೆಯುತ್ತಾರೆಂದರೆ ಇದು ಅತಿರೇಕ. ಬಹುಶಃ ಇದನ್ನು ಆಡಳಿತ ಪಕ್ಷಕ್ಕೆ ಸೇರಿದವರೆ ಮಾಡಿರುತ್ತಾರೆ, ಇದು ಅಕ್ಷಮ್ಯ ಅಪರಾಧ ಎಂದರು.

ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ
ವಿರೋಧ ಪಕ್ಷದ ನಾಯಕ ಎಂದರೆ ಅದು ಸಾಂವಿಧಾನಿಕ ಹುದ್ದೆ, ಓರ್ವ ಮಂತ್ರಿ, ಮುಖ್ಯಮಂತ್ರಿಗೆ ಎಷ್ಟು ಗೌರವವಿರಬೇಕೋ ಅಷ್ಟೇ ಗೌರವ ಸಾಂವಿಧಾನಿಕವಾಗಿದೆ. ಅವರಿಗೆ ಈ ರೀತಿಯ ವರ್ತನೆ ಮಾಡುತ್ತಾರೆಂದರೆ ಅವರು ಯಾವ ಕೆಳಮಟ್ಟಕ್ಕೆ ಹೋಗಿದ್ದಾರೆ ಎನ್ನುವುದು ಅರ್ಥವಾಗುತ್ತದೆ ಎಂದು ಕಿಡಿಕಾರಿದರು.
ಸರ್ಕಾರ ನೆರೆ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯವಾಗಿದೆ. ಯಾವುದೇ ರೀತಿಯ ಪರಿಹಾರ ನೀಡಿಲ್ಲ. ನಮ್ಮ ಹಳ್ಳಿಗಳಲ್ಲೇ ಆರೇಳು ಸಾವಿರ ಎಕರೆ ಬೆಳೆ ಹಾನಿಯಾಗಿದೆ, ಬೆಳೆ ಎಲ್ಲಿಯೂ ಇಲ್ಲ. ಹಳ್ಳಕೊಳ್ಳಗಳು ತುಂಬಿ ಹರಿದಿರುವುದರಿಂದ ಮಣ್ಣುಗಳು ಬಂದು ಬಿದ್ದಿದೆ, ರೈತ ತಲೆ ಮೇಲೆ ಕೈ ಹೊತ್ತು ಕೂರುವಂತಹ ಪರಿಸ್ಥಿತಿ ಬಂದಿದೆ, ಸರ್ಕಾರ ನೆರೆ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೌದಿಗೆ ಹೋಗಿ ಸೆಟಲ್ ಆದ ಪತ್ನಿ; ಮಕ್ಕಳೊಂದಿಗೆ ವಿಷ ಸೇವಿಸಿ ಪತಿ ಆತ್ಮಹತ್ಯೆ

About The Author

You May Also Like

More From Author

+ There are no comments

Add yours