ಅಕ್ಕ – ತಂಗಿಯ ಜಗಳ; ಆತ್ಮಹತ್ಯೆಯಲ್ಲಿ ಅಂತ್ಯ

1 min read

Tumkur News
ತುಮಕೂರು: ಅಕ್ಕ ಮತ್ತು ತಂಗಿಯ ನಡುವೆ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ.

ಡಿಎಸ್ಎಸ್ ಮುಖಂಡನ ಬರ್ಬರ ಕೊಲೆ!

ಸುಮಾರು 21 ವರ್ಷದ ಮಹಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಅಗಳಿಯ ಮೂಲದವರಾಗಿದ್ದು, ಮಹಾಲಕ್ಷ್ಮೀಯ ಗಂಡ ಗ್ಯಾಸ್ ಗಾಡಿಯನ್ನು ಓಡಿಸುತ್ತಿದ್ದನೆಂದು ತಿಳಿದು ಬಂದಿದೆ. ಈ ಕುಟುಂಬದ ಜೊತೆ ಮಹಾಲಕ್ಷ್ಮಿ ತಂಗಿ ಕೂಡ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಹಾಲಿನ ಟ್ಯಾಂಕರ್ ಗೆ ಢಿಕ್ಕಿ; ಯುವಕ ಸಾವು

ಇತ್ತೀಚಿಗೆ ಅಕ್ಕ – ತಂಗಿಯ ಮಧ್ಯೆ ಜಗಳ ನಡೆದಿದೆ. ಇದರಿಂದ ಬೇಸತ್ತ ಅಕ್ಕ ಮಹಾಲಕ್ಷ್ಮಿ ತನ್ನೂರಿಗೆ ಹೋಗಿದ್ದಾರೆ. ಕಳೆದ ಮಂಗಳವಾರ ಮತ್ತೆ ತುಮಕೂರಿಗೆ ಬಂದಿದ್ದಾರೆ. ನಂತರ ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಬಿ.ಎ ಪದವಿ ಓದುತ್ತಿದ್ದರು. ಎಂದಿನಂತೆ ಮಹಾಲಕ್ಷ್ಮಿ ಮಂಗಳವಾರ ಕಾಲೇಜಿಗೆ ಹೋಗಿದ್ದಾರೆ. ನಂತರ ಮಧ್ಯಾಹ್ನದ ಹೊತ್ತಿಗೆ ಅಕ್ಕ ಮಹಾಲಕ್ಷ್ಮಿ ಮನೆಗೆ ಬಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜು ಮುಗಿಸಿಕೊಂಡು ತಂಗಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

About The Author

You May Also Like

More From Author

+ There are no comments

Add yours