ಪಿಎಸ್‌ಐ ನೇಮಕಾತಿ ಪ್ರಕರಣ; ಪಿಎಸ್‌ಐ ಹರೀಶ್‌ ಬಂಧನ

1 min read

Tumkur News
ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ವಿಶೇಷ ತನಿಖಾ ತಂಡ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯ ಸಬ್‌ಇನ್‌ ಸ್ಪೆಕ್ಟರ್‌ ಕೆ. ಹರೀಶ್‌ನನ್ನು ಬುಧವಾರ ಬಂಧಿಸಿದ್ದು, 10 ದಿನಗಳ ಪೊಲೀಸ್‌ ವಶಕ್ಕೆ ಪಡೆದುಕೊಂಡಿದೆ.

ಡಿಎಸ್ಎಸ್ ಮುಖಂಡನ ಬರ್ಬರ ಕೊಲೆ!

ಈ ಬೆನ್ನಲ್ಲೇ ಪಿಎಸ್‌ಐ ಹರೀಶ್‌ನನ್ನು ಡಿಸಿಪಿ ಸಂಜೀವ್‌ ಎಂ. ಪಾಟೀಲ್‌ ಅಮಾನತು ಮಾಡಿದ್ದಾರೆ. 2018ನೇ ಬ್ಯಾಚ್‌ನ ಪಿಎಸ್‌ಐ ಆಗಿರುವ ಹರೀಶ್‌, ಇತ್ತೀಚೆಗೆ ಬಿಡುಗಡೆಯಾದ ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 12ನೇ ರ್‍ಯಾಂಕ್‌ ಪಡೆದಿರುವ ಆರ್‌. ಮಧು ಮತ್ತು 13ನೇ ರ್‍ಯಾಂಕ್‌ ಪಡೆದಿರುವ ಎನ್‌. ದಿಲೀಪ್‌ ಕುಮಾರ್‌ ಬಳಿ ಒಟ್ಟು 85 ಲಕ್ಷ ರೂ. ಪಡೆದು ಪಿಎಸ್‌ಐ ಹುದ್ದೆ ಕೊಡಿಸಿದ್ದ.

3 ವರ್ಷಗಳ ಹಿಂದೆ ಮಹಿಳೆಯನ್ನು ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಬಂಧನ!

ಪಿಎಸ್‌ಐ ಹರೀಶ್‌ಗೆ ಮೂರು ಬಾರಿ ಸಿಐಡಿ ನೋಟಿಸ್‌ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಹರೀಶ್‌ ಹೈಕೋರ್ಟ್‌ ಮೊರೆ ಹೋಗಿ, ತಾವು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಆದರೂ ನೋಟಿಸ್‌ ನೀಡಿದ್ದಾರೆ. ಅದನ್ನು ರದ್ದು ಮಾಡಿ ಅಥವಾ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

About The Author

You May Also Like

More From Author

+ There are no comments

Add yours