ತುಮಕೂರು: 112 ಜನರ ಬಂಧನ!:146 ಪ್ರಕರಣ ದಾಖಲು
Tumkurnews
ತುಮಕೂರು: ಅಬಕಾರಿ ಇಲಾಖೆಯು ಸಾರ್ವತ್ರಿಕ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಬಕಾರಿ ಅಕ್ರಮದ ಆರೋಪದ ಮೇಲೆ ಮಾರ್ಚ್ 16 ರಿಂದ 24ರವರೆಗೆ ಜಿಲ್ಲೆಯಾದ್ಯಂತ 191 ದಾಳಿ ನಡೆಸಿ 146 ಮೊಕದ್ದಮೆಗಳನ್ನು ದಾಖಲಿಸಿದ್ದು, 112 ಆರೋಪಿಗಳನ್ನು ದಸ್ತಗಿರಿಗೊಳಿಸಿ 111 ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಒಬ್ಬ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಾಳಿಯಲ್ಲಿ 77,72,872 ರೂ. ಮೌಲ್ಯದ 7651 ಲೀಟರ್ ಮದ್ಯ, 17648 ಲೀಟರ್ ಬಿಯರ್, 30 ಲೀಟರ್ ಸೇಂದಿ ಸೇರಿ 20 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours