ಬಿಎಸ್ ವೈ ಕುಟುಂಬದಿಂದ ಕುಣಿಗಲ್ ನಲ್ಲಿ ಗ್ರಹಣ ದೋಷ ಪರಿಹಾರ ಪೂಜೆ

1 min read

 

 

 

 

 

ತುಮಕೂರು,(ಜೂ.21) ಕುಣಿಗಲ್, tumkurnews.in:
ಸೂರ್ಯ ಗ್ರಹಣ ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ತಮ್ಮ ಮನೆ ದೇವರಾದ ಕುಣಿಗಲ್ ತಾಲ್ಲೂಕಿನ ಶ್ರೀ
ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ಬೆಳ್ಳಗ್ಗೆಯೇ ವಿಶೇಷ ಹೋಮ ಪೂಜೆ ನೆರವೇರಿಸಿದರು.ಸಿಎಂ ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ದಂಪತಿ ಹಾಗೂ ಪುತ್ರಿ ಅರುಣಾ ದೇವಿ ಸೇರಿದಂತೆ ಕುಟುಂಬದ ಸದಸ್ಯರು ಶನಿವಾರ ರಾತ್ರಿಯೇ ಎಡೆಯೂರು ಪುಣ್ಯ ಕ್ಷೇತ್ರಕ್ಕೆ ಅಗಮಿಸಿ ತಂಗಿದ್ದರು.
ಶನಿವಾರ ರಾತ್ರಿಯಿಂದ ಬೆಳಗ್ಗೆ ವರೆಗೂ ಗ್ರಹಣ ದೋಣ ನಿವಾರಣೆಗಾಗಿ
ಹೋಮ, ಮಹಾರುದ್ರಾಭಿಷೇಕ, ರಾಜೋಪಚಾರ, ಚಿನ್ನದ ರಥದ ಸೇವೆ ಸೇರಿದಂತೆ ಹಲವು ಪೂಜಾ ಸೇವೆಗಳನ್ನು ನೆರೆವೇರಿಸಿದರು.

You May Also Like

More From Author

+ There are no comments

Add yours