Tumkur News
ತುಮಕೂರು: ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಂತವಾರು ಮಾಹಿತಿ ಕಣಜ ಯೋಜನೆಯನ್ನು ವಿಸ್ತರಿಸಿ ಜಿಲ್ಲೆಯ ನಾಗರಿಕರಿಗೆ ಆರೋಗ್ಯಕರ ಮತ್ತು ಮಾಹಿತಿಪೂರ್ಣ ಪ್ರಜಾ ಪ್ರಭುತ್ವವನ್ನು ನಿರ್ಮಿಸಲು ಪೂರಕವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು.
ರಾಜ್ಯದ ನಾಗರೀಕರ ಸಬಲೀಕರಣಕ್ಕಾಗಿ ಕಣಜ ಪೋರ್ಟಲ್
ಇ-ಡಿಜಿಟಲ್ ಸಂವಾದವನ್ನು ಪಂಚಾಯತ್ ಮಟ್ಟದಲ್ಲಿ ನಡೆಸುವುದರ ಮೂಲಕ ಮಾಹಿತಿ ಕಣಜ ಪೋರ್ಟಲ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕರ್ನಾಟಕ ಸರ್ಕಾರವು ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯಲ್ಲಿ ವಿಶೇಷ ಗ್ರಾಮಸಭೆ, ಡಿಜಿಟಲ್ ಸಂವಾದವನ್ನು ಆಯೋಜಿಸಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಮಾನ್ಯ ಸಂಸದರಾದ ಜಿ.ಎಸ್. ಬಸವರಾಜು ರವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
+ There are no comments
Add yours