Tumkurnews
ತುಮಕೂರು; ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಆಟೋ ಚಾಲಕ ಅಮ್ಜದ್ ಪತ್ತೆಗೆ ಡ್ರೋಣ್ ಕಾರ್ಯಾಚರಣೆ ಆರಂಭವಾಗಿದೆ.
ಶನಿವಾರ ಸಂಜೆ ಆಟೋ ಚಾಲಕ ಅಮ್ಜದ್ ಗುಬ್ಬಿ ಗೇಟ್ ರಿಂಗ್ ರಸ್ತೆಯ ರಾಜಕಾಲುವೆಯಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಅವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಈವರೆಗೆ ಅಮ್ಜದ್ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ತಂಡ ಡ್ರೋಣ್ ಮೂಲಕ ಹುಡುಕಾಟ ಆರಂಭಿಸಿದೆ.
ಕಾಲುವೆಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ; ಮಳೆ ಫೋಟೋ ತೆಗೆಯುವಾಗ ಘಟನೆ
ಕಸದ ರಾಶಿಯಲ್ಲಿ ಶೋಧ; ಅಮ್ಜದ್ ಪತ್ತೆಗಾಗಿ ರಾಜಕಾಲುವೆಯ ಕಸದ ರಾಶಿಯಲ್ಲಿ ತೀವ್ರ ಶೋಧ ನಡೆದಿದೆ. ಬೆಳಗ್ಗೆ 6.30ಕ್ಕೆ ಆರಂಭವಾದ ಶೋಧದಲ್ಲಿ ಈವರೆಗೆ ಯಾವುದೇ ಸುಳಿವು ದೊರೆತಿಲ್ಲ. ಹೀಗಾಗಿ ಎನ್.ಡಿ.ಆರ್.ಎಫ್ ಕಾರ್ಯಾಚರಣೆ ತಂತ್ರವನ್ನು ಬದಲಾಯಿಸಿದೆ.
ಮಳೆ ನೀರಿನಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಪತ್ತೆಗೆ NDRF ಆಗಮನ; ಮುಂದುವರೆದ ಶೋಧ ಕಾರ್ಯಾಚರಣೆ
ಕಾರ್ಯತಂತ್ರ ಬದಲು; ಕಾಲುವೆಗೆ ಹರಿಯುವ ನೀರನ್ನು ತಡೆದು ಕಾರ್ಯಾಚರಣೆ ನಡೆಸಲು ಇದೀಗ ತೀರ್ಮಾನಿಸಲಾಗಿದೆ. ಜೆಸಿಬಿ ಬಳಸಿ ರಾಜಕಾಲುವೆಯ ನೀರು ಹರಿಯುವ ದಿಕ್ಕನ್ನು ಬದಲಾಯಿಸಲಾಗಿದ್ದು, ಕಾರ್ಯತಂತ್ರ ಬದಲಾಯಿಸಿ ಶೋಧ ನಡೆಸಲಾಗುತ್ತಿದೆ.
ಉಪ ವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ ಸ್ಥಳದಲ್ಲಿದ್ದು, ಕಾರ್ಯಾಚರಣೆಯನ್ನು ಅವಲೋಕಿಸುತ್ತಿದ್ದಾರೆ.
+ There are no comments
Add yours