Tumkurnews
ತುಮಕೂರು; ಅಪ್ರಾಪ್ತ ಬಾಲಕನೋರ್ವನಿಗೆ ಚೂರಿ ಇರಿದಿರುವ ಘಟನೆ ನಗರ ಸಮೀಪದ ದಿಬ್ಬೂರಿನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು, ಚೂರಿ ಇರಿತಕ್ಕೊಳಗಾಗಿರುವ ವಿನೋದ್(17) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮತದಾರರ ಗುರುತಿನ ಚೀಟಿ ವಿತರಣೆಗೆ ಗ್ರಹಣ; ಕಾರಣ ಕ್ಷುಲ್ಲಕ!
ದಿಬ್ಬೂರಿನಲ್ಲಿ ಮೂವರು ವ್ಯಕ್ತಿಗಳು ಮಂಜುನಾಥ್ ಎಂಬಾತನೊಂದಿಗೆ ಜಗಳ ಮಾಡಿಕೊಂಡು ಆತನ ಮೇಲೆ ಹಲ್ಲೆ ಮಾಡುತ್ತಿದ್ದರು. ಆಗ ಸ್ಥಳಕ್ಕೆ ಬಂದ ವಿನೋಧನ ಹೊಟ್ಟೆಗೆ ಆರೋಪಿಯೋರ್ವ ಚೂರಿಯಿಂದ ಇರಿದಿದ್ದಾನೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕ, ‘ಚೂರಿ ಇರಿದವರು ಮಂಜಣ್ಣನ ಜೊತೆ ಜಗಳ ಮಾಡಿ, ಹೊಡೆಯುತ್ತಿದ್ದರು. ನಾನು ಅಲ್ಲೇ ನಿಂತಿದ್ದೆ. ಏಕಾಏಕಿ ಬಂದು ನನ್ನ ಹೊಟ್ಟೆಗೆ ಚೂರಿ ಹಾಕಿದರು. ನನಗೆ ಯಾಕೆ ಚೂರಿ ಹಾಕಿದರೂ ಗೊತ್ತಿಲ್ಲ, ನನಗೂ ಅವರ ಗಲಾಟೆಗೂ ಸಂಬಂಧವೇ ಇರಲಿಲ್ಲ’ ಎಂದು ತಿಳಿಸಿದ್ದಾನೆ.
ಹಣಕ್ಕಾಗಿ ಕಿಡ್ನಾಪ್; ತುಮಕೂರು ಎಸ್ಪಿ ಕಚೇರಿ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನ
+ There are no comments
Add yours