https://chat.whatsapp.com/Haj1IrKLgZpAIglCBfQbtB" alt="" width="397" height="133" />
ಡಿ.ಕೆ ಸುರೇಶ್ ಸೋಲಿನಿಂದಲೇ ಹೊಸ ರಾಜಕಾರಣ; ಹೊಸ ಸರ್ಕಾರ ರಚನೆ; ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ
Tumkurnews
ತುಮಕೂರು: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಹೊಸ ಸರ್ಕಾರ ರಚನೆಯಾಗುತ್ತದೆ. ಡಿ.ಕೆ ಸುರೇಶ್ ಸೋಲಿನಿಂದಲೇ ಹೊಸ ರಾಜಕಾರಣ ಆರಂಭವಾಗುತ್ತದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ ಟಾಪರ್ಸ್’ಗೆ ಸನ್ಮಾನ, ಹಣಕಾಸಿನ ನೆರವು ನೀಡಿದ ಡಿ.ಕೆ ಶಿವಕುಮಾರ್
ತುಮಕೂರಿನಲ್ಲಿ ಮಾತನಾಡಿದ ಅವರು, ನಾನೇ ಸ್ಪಷ್ಟವಾಗಿ ಹೇಳುತ್ತೇನೆ, ಈಗಾಗಲೇ ಸಚಿವ ಸತೀಶ್ ಜಾರಕಿಹೋಳಿ ಕ್ಲೀಯರ್ ಆಗಿ ಹೇಳಿದ್ದಾರೆ. ‘ನಮ್ಮಲ್ಲಿ ಬಂಡಾಯ ಇದೆ, ಭಿನ್ನಾಭಿಪ್ರಾಯ ಇದೆ’ ಅಂತಾ. ಹಾಗಾಗಿ ನನಗನ್ನಿಸುತ್ತೆ ಕಾಂಗ್ರೆಸ್ನಲ್ಲಿ ಈಗಾಗಲೇ ಮೂರು ಗುಂಪು ಇದೆ ಎಂದು.
ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್’ರನ್ನು ಸತೀಶ್ ಜಾರಕಿಹೊಳಿ, ಡಾ.ಜಿ ಪರಮೇಶ್ವರ್, ಸಿದ್ದರಾಮಯ್ಯ ಎಲ್ಲರೂ ಸೇರಿಕೊಂಡು ಸೋಲಿಸುತ್ತಾರೆ. ಡಿ.ಕೆ ಸುರೇಶ್ ಸೋಲಿನಿಂದ ಪ್ರಾರಂಭವಾಗುವ ರಾಜಕಾರಣವು ಕೊನೆಯ 6 ತಿಂಗಳಲ್ಲಿ ಎಂಡ್ ಆಗುತ್ತದೆ ಎಂದು ಸುರೇಶ್ ಗೌಡ ಹೇಳಿದ್ದಾರೆ.
ತುಮಕೂರು: 25 ಸಾವಿರ ಬಂಡವಾಳ: ತಿಂಗಳಿಗೆ 3 ಲಕ್ಷ ಆದಾಯ!
ಈ ಸರ್ಕಾರ ಕೋಲ್ಯಾಪ್ಸ್ ಆಗುತ್ತದೆ. ಹೊಸ ಸರ್ಕಾರ ರಚನೆಯಾಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ ಸೋಲಿನಿಂದ ಬಂಡಾಯ ಜೋರಾಗಿ ಪ್ರಾರಂಭವಾಗುತ್ತದೆ. ಎಲ್ಲರೂ ಕಾದು ನೋಡಿ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ
+ There are no comments
Add yours