ಮೂವರು ಬೆಸ್ಕಾಂ ನೌಕರರ ಮೇಲೆ ತೀವ್ರ ಹಲ್ಲೆ, ಪ್ರಾಣ ಬೆದರಿಕೆ

1 min read

 

ತುರುವೇಕೆರೆ,(26) tumkurnews.in

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಿ.ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಸ್ಕಾಂ ನೌಕರರ ಮೇಲೆ ತೀವ್ರವಾದ ಹಲ್ಲೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ಕುರಿತು ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಸಿ.ಎಸ್ ಪುರ ಬೆಸ್ಕಾಂ ಶಾಖೆಯ ಕಿರಿಯ ಸಹಾಯಕ ಮಾರ್ಗದಾಳು ಮನು ಹೆಚ್.ಎಂ ಎಂಬುವವರು ಜೂನ್ 25 ರಂದು ದೂರು ದಾಖಲಿಸಿದ್ದಾರೆ.
ಜೂ.24 ರಂದು ಕೆ.ಜಿ ಟೆಂಪಲ್ ಕ್ಯಾಂಪ್ ಉಪಸ್ಥಾವರದಲ್ಲಿ ರಾತ್ರಿ 8.45 ರ ಸಮಯದಲ್ಲಿ ಕೆಲಸ ಮಾಡುತ್ತಿದ್ದಾಗ ಹಲ್ಲೆ ನಡೆದಿರುವುದಾಗಿ ದೂರು ದಾಖಲಿಸಿದ್ದಾರೆ.
ತಮ್ಮ ಜೊತೆಯಲ್ಲಿ ಇಂಜಿನಿಯರ್ ಚಿರಂಜೀವಿ ಹಾಗೂ ಸಹಾಯಕ ಚೇತನ್ ಎನ್.ಎಂ ರವರು ಇದ್ದರು. ಈ ಸಂದರ್ಭದಲ್ಲಿ ಉಪಸ್ಥಾವರದ ನಿಷೇಧಿತ ಪ್ರದೇಶವನ್ನು ಪ್ರವೇಶಿಸಿದ ದಾದುಬಾಯಿ ಪಾಳ್ಯದ ರಾಜ ಅಮುಲ್ ಸಾಬ್ ಎಂಬುವರ ಮಗ ನಸೀರ್, ರೆಹಮತ್ ನಗರದ ವಾಸಿಗಳಾದ ಜಲೀಲ್ ಸಾಬ್ ಎಂಬುವರ ಪುತ್ರ ಮುಬಾರಕ್, ಶೇಕ್ ಕಲಂದರ್ ಅವರ ಮಗ ಆಸೀಫ್ ಹಾಗೂ ಸಮೀವುಲ್ಲಾರವರ ಮಗ ಅಜೀಮ್ ರೊಂದಿಗೆ ಇನ್ನೂ ಇತರರು ಬಂದು ನಮ್ಮ ಮೂವರ ಮೇಲೆ ತೀವ್ರ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

 

 

You May Also Like

More From Author

+ There are no comments

Add yours