ಸ್ಯಾಂಡಲ್’ವುಡ್ ನಟಿ ಮಯೂರಿ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ

1 min read

 

 

 

 

 

ಸ್ಯಾಂಡಲ್’ವುಡ್ ನಟಿ ಮಯೂರಿ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಯೂರಿ ಮತ್ತು ಅರುಣ್ ರಾಜ್ ದಾಂಪತ್ಯದಲ್ಲಿ‌ ಬಿರುಕು ಮೂಡಿದ್ದು, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ‌ ಸಲ್ಲಿಸಿದ್ದಾರೆ. ಪರಸ್ಪರ ಸಮ್ಮತಿ ಮೇರೆಗೆ ದಂಪತಿಗಳು ಬೆಂಗಳೂರಿನಲ್ಲಿ ಗುರುವಾರ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.
ಚಿತ್ರನಟಿ ಮಯೂರಿ ಅವರು ರೂಪದರ್ಶಿ, ನಟಿಯಾಗಿ ಹೆಸರು ಮಾಡಿದ್ದಾರೆ. ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ನಟನೆ ಆರಂಭಿಸಿದ ಅವರು, ಕೃಷ್ಣಲೀಲಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇಷ್ಟಕಾಮ್ಯ, ನಟರಾಜ ಸರ್ವಿಸ್ ಮತ್ತು ರುಸ್ತುಂ ಕನ್ನಡ ಚಲನ ಚಿತ್ರದಲ್ಲಿ ನಟಿಸಿದ್ದಾರೆ.

(ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕೋರ್ಟ್‌ನಲ್ಲಿ ಹಾಜರಿರುವ ಮಯೂರಿ(ಎಡಚಿತ್ರ), ವಿವಾಹ ಚಿತ್ರ(ಬಲಚಿತ್ತ)
ಪ್ರೇಮ ವಿವಾಹ: ನಟಿ ಮಯೂರಿ ಅವರು 2020ರ ಜೂ.12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅವರು ಬಹುಕಾಲದ ಗೆಳೆಯ ಅರುಣ್‌ ಜೊತೆ ವಿವಾಹವಾಗಿದ್ದರು. ಮೂಲತಃ ಹುಬ್ಬಳ್ಳಿಯವರಾದ ಮಯೂರಿ ಮತ್ತು ಅರುಣ್ 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೇ ನಾಲ್ಕೇ ವರ್ಷಗಳಲ್ಲಿ ದಾಂಪತ್ಯ ಮುರಿದು ಬಿದ್ದಿದೆ.

You May Also Like

More From Author

+ There are no comments

Add yours