ಲಂಚ ಪಡೆಯುವಾಗಲೇ ಸಿಬಿಐ ಬಲೆಗೆ ಬಿದ್ದ ಅಧಿಕಾರಿ! ಶಾಕ್ ಆದ ಸ್ಯಾಂಡಲ್’ವುಡ್

1 min read

 

 

 

 

 

ಲಂಚ ಪಡೆಯುವಾಗಲೇ ಸಿಬಿಐ ಬಲೆಗೆ ಬಿದ್ದ ಅಧಿಕಾರಿ! ಶಾಕ್ ಆದ ಸ್ಯಾಂಡಲ್’ವುಡ್

Tumkurnews
ಬೆಂಗಳೂರು: ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ಪ್ರಶಾಂತ್ ಕುಮಾರ್ ಎಂಬುವರು ಲಂಚ ಪಡೆಯುವಾಗಲೇ ಸಿಬಿಐ ಬಲೆಗೆ ಬಿದ್ದಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಟ, ನಿರ್ಮಾಪಕ ಟೈಗರ್ ನಾಗ್, ಸಂವಿಧಾನ ಕಂಬೈನ್ಸ್’ನಡಿ ಅಡವಿ ಎಂಬ ಚಿತ್ರ ನಿರ್ಮಾಣ ಮಾಡಿದ್ದು, ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಸೆನ್ಸಾರ್ ಪತ್ರ ಮಾಡಿಸಲು ನೀಡಿದ್ದರು.
ಈ ವೇಳೆ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ಪ್ರಶಾಂತ್ ಕುಮಾರ್, ಸೆನ್ಸಾರ್ ಮಾಡಿಕೊಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಟೈಗರ್ ನಾಗ್ ಮತ್ತು ನಟ, ನಿರ್ದೇಶಕ ಆಸ್ಕರ್ ಕೃಷ್ಣ ಅವರು ಸಿಬಿಐಗೆ ದೂರು ಸಲ್ಲಿಸಿದ್ದರು.

ಲಂಚ ಸ್ವೀಕಾರ: ಕೊರಟಗೆರೆ ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ
ದೂರು ಆಧರಿಸಿ 10ಕ್ಕೂ ಅಧಿಕ ಮಂದಿ ಸಿಬಿಐ ಅಧಿಕಾರಿಗಳು ಸಿನಿಮಾ ಮಾದರಿಯಲ್ಲೇ ಕಾರ್ಯಾಚರಣೆ ನಡೆಸಿ 12 ಸಾವಿರ ರೂ. ಲಂಚ ಪಡೆಯುವಾಗ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಬೆಂಗಳೂರಿನ ಮಲ್ಲೇಶ್ವರಂನ ಆರ್.ವಿ ಸ್ಟುಡಿಯೋದಲ್ಲಿ ರೆಡ್ ಹ್ಯಾಂಡ್ ಆಗಿ ಮಂಗಳವಾರ ಬಂಧಿಸಿದ್ದಾರೆ.
ಚಿತ್ರರಂಗ ಶಾಕ್!: ಸೆನ್ಸಾರ್ ಮಂಡಳಿಯ ಅಧಿಕಾರಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿರುವ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದೆ.
ಹೊಸ ನಿರ್ಮಾಪಕರು ಸಿನಿಮಾ ರಂಗಕ್ಕೆ ಬಂದಾಗ ಸೆನ್ಸಾರ್ ಅಧಿಕಾರಿಗಳು ಹೇಗೆಲ್ಲಾ ತೊಂದರೆ ಕೊಡುತ್ತಾರೆ ಎನ್ನುವುದು ಈ ಪ್ರಕರಣದಿಂದ ಬಯಲಾಗಿದೆ.

(ಚಿತ್ರ: ಎಡದಿಂದ ಪ್ರಶಾಂತ್ ಕುಮಾರ್, ಟೈಗರ್ ನಾಗ್)

ಆಶಾ ಕಾರ್ಯಕರ್ತೆ ಅನುಮಾನಸ್ಪದ ಸಾವು: ವಿಡಿಯೋ

You May Also Like

More From Author

+ There are no comments

Add yours