ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
Tumkurnews
ತುಮಕೂರು: ರೈಲಿಗೆ ಅಡ್ಡ ಸಿಲುಕಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ತುಮಕೂರಿನ ಮರಳೂರು ಗ್ರಾಮದ ನಿವಾಸಿಗಳಾದ ಸಿದ್ದಗಂಗಯ್ಯ(62), ಪತ್ನಿ ಸುನಂದ(50) ಹಾಗೂ ಮಗಳು ಗೀತಾ(30) ಆತ್ಮಹತ್ಯೆ ಮಾಡಿಕೊಂಡವರು.
ತುಮಕೂರಿನ ಪಂಡಿತನಹಳ್ಳಿ ಬಳಿ ಈ ಮೂವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸ್ಥಳ ಯಶವಂತಪುರ ರೈಲ್ವೆ ಪೊಲೀಸ್ ವ್ಯಾಪ್ತಿಗೆ ಒಳಪಟ್ಟಿದ್ದು, ಪ್ರಕರಣ ದಾಖಲಾಗಿದೆ.
ಸಾಲ ಕಾರಣ?: ಆತ್ಮಹತ್ಯೆಗೆ ಕುಟುಂಬ ಮಾಡಿಕೊಂಡಿದ್ದ ವಿಪರೀತ ಸಾಲ ಕಾರಣ ಎನ್ನಲಾಗಿದೆ. ಮೃತ ಸಿದ್ದಗಂಗಯ್ಯ ಅವರು ಒಂದೂವರೆ ವರ್ಷದ ಹಿಂದಷ್ಟೇ ಬೆಸ್ಕಾಂನಿಂದ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಬಳಿ ಕ್ಯಾಂಟೀನ್ ನಡೆಸುತ್ತಿದ್ದರು. ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿದೆ.
ಲಾರಿ-ದ್ವಿಚಕ್ರ ವಾಹನ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು
+ There are no comments
Add yours