Tumkurnews
ತುಮಕೂರು; ದಸರಾ ಎಂದರೆ ಬೊಂಬೆಗಳ ಹಬ್ಬವೂ ಹೌದು. ಮಹಿಳೆಯರು ದಸರಾವನ್ನು ಬೊಂಬೆಗಳ ಪ್ರತಿಷ್ಟಾಪನೆಯೊಂದಿಗೆ ಬಹಳ ವಿಶೇಷವಾಗಿ ಆಚರಿಸುತ್ತಾರೆ. ಅಂತೆಯೇ ತುಮಕೂರು ನಗರದ ಹಲವೆಡೆ ಬೊಂಬೆಗಳನ್ನು ಕೂರಿಸಿ ಮಹಿಳೆಯರು ಸಂಭ್ರಮದ ದಸರಾ ಆಚರಿಸಿದರು.
ನಗರದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಅಜಿತ್ ಕುಮಾರ್ ಮತ್ತು ಸೀಮಾ ದಂಪತಿಗಳು ತಮ್ಮ ಮನೆಯಲ್ಲಿ ನೂರಾರು ಬೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸಿದರು. ಈ ವೇಳೆ ನೆರೆಹೊರೆಯ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಈ ಬೊಂಬೆಗಳನ್ನು ನೋಡಿ ಸಂಭ್ರಮಿಸಿದರು. ಒಟ್ಟಾರೆಯಾಗಿ ನಾಡ ಹಬ್ಬ ದಸರಾ ನಾಡಿನಾದ್ಯಂತ ಸಂಭ್ರಮ ಮೂಡಿಸಿರುವುದು ಕಂಡು ಬಂದಿತು.
+ There are no comments
Add yours