ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

1 min read

 

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
Tumkurnews
ತುಮಕೂರು; ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿ ತುಮಕೂರು-ಬೆಂಗಳೂರು ಎನ್.ಹೆಚ್. 48 ರಸ್ತೆಯ ಪಕ್ಕದಲ್ಲಿರುವ ಅಶ್ವತ್ ನಾರಾಯಣ್ ಗೌಡ ಅವರ ತೆಂಗಿನ ತೋಟದ ಜಮೀನಿನಲ್ಲಿ ಬೇವಿನ ಮರದ ಕೊಂಬೆಗೆ ಪ್ಲಾಸ್ಟಿಕ್ ಹುರಿಯಿಂದ ಅಪರಿಚಿತ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓಮ್ನಿ ಕಾರಿನಲ್ಲಿ ಸಜೀವ ದಹನವಾದ ವ್ಯಕ್ತಿ; ಅಪಘಾತ? ಕೊಲೆ?; ಈ ವಿಡಿಯೋದಲ್ಲಿದೆ ಸುಳಿವು!
ಮೃತನು ಸೆಪ್ಟೆಂಬರ್ 23ರಂದು ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಮೃತ ಪಟ್ಟಿರುವಂತೆ ಕಂಡುಬರುತ್ತಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ಈತನು ಸುಮಾರು 45 ರಿಂದ 50 ವರ್ಷದವನಾಗಿದ್ದು, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ. ಮೃತನ ಮೈಮೇಲೆ ತುಂಬು ತೋಳಿನ ಹಳದಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816-2281124/20/2278000ಯನ್ನು ಸಂಪರ್ಕಿಸಬಹುದು ಎಂದು ಸಬ್‍ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.

ದೇಶಾದ್ಯಂತ ಪಿಎಫ್ಐ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ

About The Author

You May Also Like

More From Author

+ There are no comments

Add yours