Tumkur News
ತುಮಕೂರು: ರಾಹುಲ್ ಗಾಂಧಿ ಅಪರಾಧಿ ಎಂದು ಸಾಬೀತಾದರೆ, ಎಲ್ಲರಂತೆ ಅವರಿಗೂ ಶಿಕ್ಷೆ ಆಗುತ್ತದೆ. ಕಾನೂನಿನಲ್ಲಿ ರಾಹುಲ್ ಗಾಂಧಿ, ಯಡಿಯೂರಪ್ಪ ಎಲ್ಲರೂ ಒಂದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತುಮಕೂರು ನಗರದಲ್ಲಿ ಕರ್ನಾಟಕ ಕಾರ್ಯನಿರತ ಪ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಅಭಿನಂದನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪೂರ್ವ ಸಿದ್ದತೆಗೊಂಡ ಸಾರ್ವಜನಿಕ ಕುಂದುಕೊರತೆ ಸಭೆ
ರಾಹುಲ್ ಗಾಂಧಿ ವಿಚಾರಣೆ ಬಗ್ಗೆ ನನಗೂ ಅದಕ್ಕೂ ಸಂಬಂಧವಿಲ್ಲ. ಇಡಿ ಅವರು ಯಾರ ಮೇಲೆ ಅನುಮಾನ ಇರುತ್ತೆ ಅವರನ್ನ ತನಿಖೆ ಮಾಡುತ್ತಾರೆ. ಸತ್ಯ ಹೊರಬಂದು, ನಿರಾಪರಾಧಿಯಾಗಿದ್ದರೆ ಅವರಿಗೆ ಯಾವ ತೊಂದರೆಯೂ ಇಲ್ಲದೆ ಹೊರಬರುತ್ತಾರೆ. ಇಡಿ ತನಿಖೆ ನಡೆಯುತ್ತಿದೆ ಕಾದು ನೋಡೋಣ ಎಂದು ಹೇಳಿದರು.
+ There are no comments
Add yours