ಯುಪಿಎಸ್ಸಿ; ಕನ್ನಡ ಮಾಧ್ಯಮದ ಅರುಣ ಸೇರಿ ಶಿರಾದ ಮೂವರು ಟಾಪರ್ಸ್!

1 min read

 

Tumkurnews
ತುಮಕೂರು; ಜಿಲ್ಲೆಯ ಶಿರಾ ತಾಲ್ಲೂಕಿನ ಮೂವರು ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಶಿರಾ ತಾಲ್ಲೂಕಿನ ಹುಲಿಕುಂಟೆ ಹೊಬಳಿ ತಡಕಲೂರು ಗ್ರಾಮದ ರೈತ ಕುಟುಂಬದ ಮಹಾಲಿಂಗಪ್ಪ ಮತ್ತು ವಿಮಲಾಕ್ಷಿ ದಂಪತಿಗಳ ಪುತ್ರಿ ಅರುಣ 308ನೇ ರ್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಅರುಣ 1ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು, ಇತರೆ ಅಭ್ಯರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.

ರೋಹಿತ್ ಚಕ್ರತೀರ್ಥ ವಿರುದ್ಧ ತೀವ್ರಗೊಂಡ ಆಕ್ರೋಶ; ಒಕ್ಕಲಿಗರ ಪ್ರತಿಭಟನೆ
ಗೌಡಗೆರೆ ಹೋಬಳಿಯ ಕಂದಾಯ ವೃತ್ತ ನಿರೀಕ್ಷಕ ವೈ.ಬಿ ಕಾಂತಪ್ಪ ಅವರ ಪುತ್ರಿ ಮಾಗೋಡು ಗ್ರಾಮಪಂಚಾಯತಿ ವ್ಯಾಪ್ತಿಯ ಯರಗುಂಟೆ ಗ್ರಾಮದ ವೈ.ಕೆ ಕಲ್ಪಶ್ರೀ 291ನೇ ರ್ಯಾಂಕ್ ಪಡೆದಿದ್ದಾರೆ.
ಯಂಜಲಗೆರೆ ಗ್ರಾಮದ ಸಬ್ ರಿಜಿಸ್ಟ್ರಾರ್ ದಿ.ಧರ್ಮೇಶ್ ಅವರ ಪುತ್ರ ಶ್ರೀಕಾಂತ್ ಉತ್ತೀರ್ಣರಾಗಿದ್ದಾರೆ. ಒಂದೇ ತಾಲ್ಲೂಕಿನ ಮೂವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಶಿರಾ ತಾಲ್ಲೂಕಿನ ಹಿರಿಮೆ ಹೆಚ್ಚಿಸಿದೆ.

(ಚಿತ್ರ; ಎಡದಿಂದ ವೈ.ಕೆ ಕಲ್ಪಶ್ರೀ, ಅರುಣ, ಶ್ರೀಕಾಂತ್)

ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours