ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ; ಸಿಎಂ ಗಾದಿಗೆ ಮತ್ತಷ್ಟು ಹತ್ತಿರ

1 min read

 

ಕಾಡಸಿದ್ದೇಶ್ವರ ಕ್ಷೇತ್ರಕ್ಕೆ ಡಿಕೆಶಿ ಭೇಟಿ; ಈಡೇರುತ್ತಾ ಸಿಎಂ ಗಾದಿ ಕನಸು

Tumkurnews
ತುಮಕೂರು; ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳ ಅಭೂತಪೂರ್ವ ಗೆಲುವು ಸಿಕ್ಕಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾನುವಾರ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು.
ತಮಗೆ ರಾಜಕೀಯವಾಗಿ ಏಳಿಗೆ ಮತ್ತು ಸಂಕಷ್ಟ ಬಂದಾಗಲೆಲ್ಲ ಡಿ.ಕೆ ಶಿವಕುಮಾರ್ ಅವರು ಈ ಕ್ಷೇತ್ರಕ್ಕೆ ‌ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಇದೀಗ ಪಕ್ಷಕ್ಕೆ ಭಾರೀ ಗೆಲುವು ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನನಸಾಗುತ್ತಾ ಸಿಎಂ ಕನಸು?; ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಆಕಾಂಕ್ಷೆ ಹೊಂದಿರುವ ಡಿ.ಕೆ ಶಿವಕುಮಾರ್ ತಮ್ಮ ರಾಜಕೀಯ ಏಳುಬೀಳಿನ ದಿನಗಳಲ್ಲಿ ಕಾಡಸಿದ್ದೇಶ್ವರ ಕ್ಷೇತ್ರದ ಮೊರೆ ಹೋಗುತ್ತಿದ್ದರು. ಇದೀಗ ಪಕ್ಷಕ್ಕೆ ಬಹುಮತ ಬಂದಿರುವ ಹಿನ್ನೆಲೆಯಲ್ಲಿ ಸಹಜವಾಗಿ ಡಿ.ಕೆ ಶಿವಕುಮಾರ್ ಕನಸು ಗರಿಗೆದರಿದೆ. ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಅವರ ಈ ಭೇಟಿ ಕುತೂಹಲ ಕೆರಳಿಸಿದ್ದು, ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

ತುಮಕೂರು ಜಿಲ್ಲೆ; ಯಾರು ಎಷ್ಟು ವೋಟ್ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

You May Also Like

More From Author

+ There are no comments

Add yours