Tumkurnews
ತುಮಕೂರು; ಕ.ವಿ.ಪ್ರ.ನಿ.ನಿ. ರವರ ಟಿ.ಎಲ್.ಎಂ. ಉಪವಿಭಾಗ ತುಮಕೂರು ರವರು 66ಕೆವಿ ಅಂತರಸನಹಳ್ಳಿಯಿಂದ ಮೆಳೆಕೋಟೆಯವರೆಗೆ ಮತ್ತು 66ಕೆವಿ ಅಂತರಸನಹಳ್ಳಿಯಿಂದ ಬೆಳ್ಳಾವಿಯವರೆಗೆ ವಿದ್ಯುತ್ ಮಾರ್ಗದ ನಿರ್ವಹಣೆ ಕೆಲಸ ಇರುವುದರಿಂದ ಆಗಸ್ಟ್ 2, 2022ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು; ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಂದು ಬೆಳ್ಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ 66/11ಕೆವಿ ಉಪಸ್ಥಾವರ ಮೆಳೆಕೋಟೆ ಪ್ರದೇಶದ ಮೆಳೆಕೋಟೆ, ಸದಾಶಿವನಗರ, ಸರಸ್ವತಿಪುರಂ, ಮರಳೂರು, ಶಾಂತಿನಗರ, ಉಪ್ಪಾರಹಳ್ಳಿ, ಕುರಿಪಾಳ್ಯ, ನಜರಾಬಾದ್, ಗಾಂಧಿನಗರ, ವಿನಾಯಕನಗರ, ಗಂಗಸಂದ್ರ, ರಾಜೀವಗಾಂಧಿನಗರ, ಗೂಳೂರು, ಮಲ್ಲಸಂದ್ರ, ಹಾಲನೂರು, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಅದಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತುಮಕೂರು; ಹಾಲು ಒಕ್ಕೂಟದಿಂದ ರೈತರಿಗೆ ಭಾರೀ ಮೋಸ; ಅಕ್ರಮ ಬಯಲಿಗೆಳೆದ ಯುವ ರೈತ
ಅಂದು ಬೆಳ್ಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ 66/11ಕೆವಿ ಉಪಸ್ಥಾವರ ಬೆಳ್ಳಾವಿ ವ್ಯಾಪ್ತಿಯಲ್ಲಿನ ಬೆಳ್ಳಾವಿ, ದೊಡ್ಡೇರಿ, ಸಿಂಗಿಪುರ, ಬುಗುಡನಹಳ್ಳಿ, ಚನ್ನೇನಹಳ್ಳಿ, ಬಾಣವಾರ, ಅಗಲಗುಂಟೆ, ಹೇಮಾವತಿ, ಸುಗುಣ, ಮಸಣಪುರ, ತಿಮ್ಲಾಪುರ, ದೊಡ್ಡವೀರನಹಳ್ಳಿ, ಚಿಕ್ಕಬೆಳ್ಳಾವಿ, ಬೋರಗೊಂಡನಹಳ್ಳಿ, ಮಾವಿನಕುಂಟೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
+ There are no comments
Add yours