Tumkurnews
ತುಮಕೂರು; ಮಳೆ ನೀರಿನಲ್ಲಿ ಆಟೋ ಚಾಲಕನೋರ್ವ ಕೊಚ್ಚಿ ಹೋಗಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ.
ಶಾಂತಿನಗರ ನಿವಾಸಿ ಅಮ್ಜದ್ ಕೊಚ್ಚಿ ಹೋದ ವ್ಯಕ್ತಿಯಾಗಿದ್ದು, ಶೋಧ ಕಾರ್ಯಾಚರಣೆ ನಡೆದಿದೆ. ನಗರದಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ರಾಜಕಾಲುವೆಗಳು ತುಂಬಿ ಹರಿಯುತ್ತಿದ್ದವು. ಇದೇ ವೇಳೆ ಗುಬ್ಬಿ ಗೇಟ್ ರಿಂಗ್ ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದ ರಾಜಕಾಲುವೆಯನ್ನು ನೋಡಲು ಆಟೋ ಚಾಲಕ ಅಮ್ಜದ್ ಆಟೋ ನಿಲ್ಲಿಸಿದ್ದು, ರಾಜಕಾಲುವೆಯ ಫೋಟೋ ತೆಗೆಯಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಮೊಬೈಲ್ ಕೈ ಜಾರಿ ಕಾಲುವೆಗೆ ಬಿದ್ದಿದೆ. ಮೊಬೈಲನ್ನು ಎತ್ತಿಕೊಳ್ಳಲು ಮುಂದಾದ ಅಮ್ಜದ್ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಏಕಾಏಕಿ ನಡೆದ ಅವಘಡದಲ್ಲಿ ಅಮ್ಜದ್, ರಭಸವಾಗಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಎರಡು ಗಂಟೆ ಕಾರ್ಯಾಚರಣೆ; ಮಳೆ ನೀರಿನಲ್ಲಿ ಕೊಚ್ಚಿ ಹೋದ ಅಮ್ಜದ್ ಪತ್ತೆಗಾಗಿ ಅಗ್ನಿಶಾಮಕ ಹಾಗೂ ಪೊಲೀಸರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಶೋಧ ಮುಂದುವರೆದಿದೆ.
+ There are no comments
Add yours