ತುಮಕೂರು: ಜಿಟಿಜಿಟಿ ಮಳೆ: ವಾಯು ವಿಹಾರಕ್ಕೆ ಅಡ್ಡಿ

1 min read

 

ಜಿಟಿಜಿಟಿ ಮಳೆ: ವಾಯು ವಿಹಾರಕ್ಕೆ ಅಡ್ಡಿ

Tumkurnews
ತುಮಕೂರು: ನಗರದಲ್ಲಿ ಕಳೆದೊಂದು ವಾರದಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಬೆಳಗ್ಗಿನ ವಾಯುವಿಹಾರಿಗಳ ಸಂಖ್ಯೆ ಕುಸಿದಿದೆ.
ನಗರದ ಅಮಾನಿಕೆರೆ ಉದ್ಯಾನವನ, ತುಮಕೂರು ವಿಶ್ವವಿದ್ಯಾಲಯ, ಜಯನಗರ ಮುಖ್ಯರಸ್ತೆ ಸೇರಿದಂತೆ ನಗರದ ವಿವಿಧೆಡೆ ಪ್ರತಿನಿತ್ಯ ಸಾವಿರಾರು ಮಂದಿ ಬೆಳಗ್ಗಿನ ವಾಯುವಿಹಾರ ಮಾಡುತ್ತಾರೆ. ಆದರೆ ಕಳೆದೊಂದು ವಾರದಿಂದ ನಗರದಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ಬೆಳಗ್ಗಿನ ವಾಯು ವಿಹಾರಕ್ಕೆ ಅಡ್ಡಿಯಾಗಿದೆ.

ತುಮಕೂರು: ಕಲ್ಪತರು ನಾಡಿಗೆ ಮಲೆನಾಡಿನ ಕಳೆ ತಂದ ಸೋನೆ ಮಳೆ
ಇಂದು ಕೂಡ ಬೆಳಗ್ಗೆ 6ಗಂಟೆಯಿಂದಲೇ ಸೋನೆ ಮಳೆ ಆರಂಭವಾಗಿದ್ದು, ಜನರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವಾಯುವಿಹಾರಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮತ್ತೊಂದೆಡೆ ಮಳೆ ಆರಂಭಕ್ಕೂ ಮುನ್ನವೇ ವಾಯು ವಿಹಾರಕ್ಕೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು ಮನೆಗೆ ತೆರಳಲು ಪರದಾಡುವಂತಾಗುತ್ತಿದೆ. ಹೀಗಾಗಿ ಜನರು ವಾಯು ವಿಹಾರಕ್ಕೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಜನರು ಮಲೆನಾಡಿನ ಅನುಭವ ಪಡೆಯುತ್ತಿರುವುದು ಕಂಡು ಬರುತ್ತಿದೆ.
ಚಿತ್ರ: ತುಮಕೂರು ನಗರದ ಅಮಾನಿಕೆರೆಯಲ್ಲಿ ಮಳೆಯಿಂದಾಗಿ ವಾಯುವಿಹಾರವನ್ನು ಅರ್ಧಕ್ಕೆ ಮುಗಿಸಿ ತೆರಳುತ್ತಿರುವ ಜನ.

 

About The Author

You May Also Like

More From Author

+ There are no comments

Add yours